Site icon Vistara News

ಮತ್ತೆ ಆಜಾನ್‌ ಮೈಕ್‌ ನಿರ್ಬಂಧದ ಕೂಗು

siddlinga

ಕಲಬುರಗಿ: ರಾಜ್ಯದಲ್ಲಿ ಮತ್ತೆ ಮೈಕ್ ದಂಗಲ್ ಆರಂಭವಾಗಿದೆ. ಮಸೀದಿಯಲ್ಲಿ ಆಜಾನ್‌ಗೆ ಬಳಸುವ ಧ್ವನಿವರ್ಧಕ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ನಡೆಸಲು ಶ್ರೀರಾಮಸೇನೆ ಮುಂದಾಗಿದೆ.

ಈ ಬಗ್ಗೆ ಆಗಸ್ಟ್ 23ರಂದು ರಾಜ್ಯದ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿರುವ ಸಿದ್ದಲಿಂಗ ಸ್ವಾಮೀಜಿ, ರಾಜ್ಯದಲ್ಲಿ ಇನ್ನು ಕೂಡಾ ಅನಧಿಕೃತವಾಗಿ ಆಜಾನ್‌ಗೆ ಮೈಕ್‌ಗಳನ್ನು ಬಳಸಲಾಗುತ್ತಿದೆ. ಇದರಿಂದ ಶಬ್ದಮಾಲಿನ್ಯವಾಗುತ್ತಿದೆ. ಸರ್ಕಾರದ ‌ಸುತ್ತೋಲೆ ನೀಡಿದ್ದರೂ ಕಡಿಮೆ ಡೆಸಿಬಲ್‌ನ ಮೈಕ್‌ಗಳನ್ನು ಬಳಸುತ್ತಿಲ್ಲ. ಹೀಗಾಗಿ ಆಗಸ್ಟ್ 23ರಂದು ಹೋರಾಟದ ಜೊತೆಗೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಸಾವಿರಾರು ಶ್ರೀರಾಮ ಸೇನೆ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಆಜಾನ್‌ V/s ಭಜನೆ:‌ ಅವಧಿ ಮೀರಿದ್ರೆ ಮತ್ತೆ ರಾಮ ಜಪದ ಎಚ್ಚರಿಕೆ ನೀಡಿದ ಕಾಳಿ ಸ್ವಾಮಿ

Exit mobile version