Site icon Vistara News

Bike accident : ರಾಜ್ಯಮಟ್ಟದ ಯುವ ಕಬಡ್ಡಿ ಆಟಗಾರ ಎನ್‌. ಸತೀಶ್‌ ಅಪಘಾತದಲ್ಲಿ ಮೃತ್ಯು, ಆಟ ಮುಗಿಸಿ ತೆರಳುತ್ತಿದ್ದಾಗ ದುರಂತ

Sathish kabaddi player

#image_title

ವಿಜಯನಗರ: ರಾಜ್ಯ ಮಟ್ಟದ ಕಬಡ್ಡಿ ಆಟಗಾರರೊಬ್ಬರು (Kabaddi player) ಬೈಕ್‌ ಅಪಘಾತದಲ್ಲಿ (Bike accident) ಮೃತಪಟ್ಟಿದ್ದಾರೆ. ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಗ್ರಾಮದ ಎನ್ ಸತೀಶ್ (22) ಎಂಬವರೇ ಮೃತಪಟ್ಟವರು. ಅವರು ಕಬಡ್ಡಿ ಆಟ ಮುಗಿಸಿ, ಊಟಕ್ಕೆ ಹೊರಡುವಾಗ ಬೈಕ್ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಅವರು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು ಸತೀಶ್‌. ಊಟಕ್ಕೆಂದು ಹೋಗುತ್ತಿದ್ದಾಗ ಬೈಕ್‌ ಅಪಘಾತಕ್ಕೆ ಒಳಗಾಗಿತ್ತು. ರಾತ್ರಿ ಅಪಘಾತ ಸಂಭವಿಸುತ್ತಿದ್ದಂತೆಯೇ ಕೂಡಲೇ ಅವರನ್ನು ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಅಲ್ಲೇ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಕಲ್ಯಾಣ ಕರ್ನಾಟಕದ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕು ಪಂದ್ಯಾವಳಿ ಇದಾಗಿದ್ದು, ಸತೀಶ್‌ ಅವರು, ಮರಿಯಮ್ಮನಹಳ್ಳಿ ತಂಡದ ಪರವಾಗಿ ಆಡುತ್ತಿದ್ದರು. ಹೊಸಪೇಟೆಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Road Accident: ಕಾರು-ಕ್ರೂಸರ್ ನಡುವೆ ಅಪಘಾತ; ಶಾಲಾ ವಿದ್ಯಾರ್ಥಿಗಳಿದ್ದ ಕ್ರೂಸರ್ ಪಲ್ಟಿ, ವಿದ್ಯಾರ್ಥಿಗಳಿಗೆ ಗಾಯ

Exit mobile version