Site icon Vistara News

ಟೌನ್ ಹಾಲ್ ಮುಂದೆ ಪ್ರತಿಭಟನೆಗಳಿಗೆ ಅವಕಾಶ ನೀಡಲು ಕ್ರಮ: ಸಿದ್ದರಾಮಯ್ಯ

Siddaramaiah releases book

ಬೆಂಗಳೂರು: ಟೌನ್ ಹಾಲ್ ಮುಂದೆ ಜನಪರ ಪ್ರತಿಭಟನೆ, ಹೋರಾಟಗಳಿಗೆ ಅವಕಾಶ ಕೊಡಿಸುವ ದಿಕ್ಕಿನಲ್ಲಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ‘ಪ್ರಗತಿಪರ ಚಳವಳಿಗಳ ನೈತಿಕ ಶಕ್ತಿ-ಡಾ.ಮರುಳಸಿದ್ದಪ್ಪ’ ಅವರ ಗೌರವ ಗ್ರಂಥ ಲೋಕಾರ್ಪಣೆಗೊಳಿಸಿ ಕೆ.ಎಂ.ಎಸ್ ದಂಪತಿಯನ್ನು ಅಭಿನಂದಿಸಿ ಮಾತನಾಡಿದ ಅವರು, ಸರ್ಕಾರವನ್ನು ಎಚ್ಚರಿಸುವ, ನಿಜವಾದ ಜನಪರವಾದ ಚಳವಳಿಗಳು ಸಮಾಜಕ್ಕೆ ಅತ್ಯಗತ್ಯ. ಇಂಥ ಪ್ರತಿಭಟನೆ, ಚಳವಳಿಗಳನ್ನು ನಾನು ಬೆಂಬಲಿಸುತ್ತೇನೆ, ಸ್ಬಾಗತಿಸುತ್ತೇನೆ ಎಂದರು.

ಆದಷ್ಟು ಶೀರ್ಘವಾಗಿ ಅಡ್ವೊಕೇಟ್ ಜನರಲ್ ಜತೆ ಚರ್ಚಿಸಿ ಟೌನ್ ಹಾಲ್ ಎದುರು ಮತ್ತೆ ಪ್ರತಿಭಟನೆಗಳಿಗೆ, ಹೋರಾಟಗಳಿಗೆ ಅವಕಾಶ ಆಗುವ ದಿಕ್ಕಿನಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದರು.

ಇದನ್ನೂ ಓದಿ | HD Kumaraswamy: ಎಚ್‌ಡಿಕೆ ಬಗ್ಗೆ ಆಕ್ಷೇಪಾರ್ಹ ಪೋಸ್ಟರ್‌; ಎಫ್‌ಐಆರ್‌ ದಾಖಲು

ಅಸಮಾನತೆ ತುಂಬಿರುವ ಜಡ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು. ಈ ಬದಲಾವಣೆ ಜನಪರ ಹೋರಾಟ, ಚಳವಳಿಗಳಿಂದ ಮಾತ್ರ ಸಾಧ್ಯ. ಆದ್ದರಿಂದ ಸರ್ಕಾರವನ್ನು ಎಚ್ಚರಿಸುವ, ನಿಜವಾದ ಜನಪರತೆಯಿಂದ ಕೂಡಿದ ಹೋರಾಟ, ಪ್ರತಿಭಟನೆಗಳು ನಡೆಯಬೇಕು ಎಂದರು.

ಸಮಾಜ ಮತ್ತು ಸರ್ಕಾರವನ್ನು ಎಚ್ಚರಿಸುವ ಹೋರಾಟಗಳಿಗೆ ಸ್ವಾಗತಿಸುವುದು ಮಾತ್ರವಲ್ಲದೆ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಬಸವಣ್ಣನವರ ಕೆಲವು ಆರಾಧಕರು ಬಸವಣ್ಣರ ವೈಚಾರಿಕತೆಯನ್ನು ಆಚರಿಸುವುದಿಲ್ಲ. ಮೌಡ್ಯವಿರೋಧಿ ಬಸವಣ್ಣನವರ ಮೌಲ್ಯಗಳನ್ನು ಆಚರಿಸುವುದಿಲ್ಲ. ಆದರೆ ಕೆ.ಮರುಳಸಿದ್ದಪ್ಪ ಅವರು ನಿಜವಾದ ಶರಣರು. ನುಡಿದಂತೆ, ಬರೆದಂತೆ ಬದುಕುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಕೆ.ಮರುಳಸಿದ್ದಪ್ಪ ಅವರದ್ದು ಬದುಕಿನಲ್ಲಿ ಉತ್ತಮ ವೈಚಾರಿಕ ಬದ್ಧತೆ, ಮಾನವೀಯ ಸ್ಪಂದನೆ ಇರುವ ವ್ಯಕ್ತಿತ್ವ ಎಂದು ಸಿಎಂ ಬಣ್ಣಿಸಿದರು.

ಇದನ್ನೂ ಓದಿ | Karnataka Politics : ಕಾಂಗ್ರೆಸ್‌ ಸೇರಿದ ಜೆಡಿಎಸ್‌ನ ಇಬ್ಬರು ಮಾಜಿ ಶಾಸಕರು; ಕೋಮುವಾದಿ ಜನತಾ ದಳವೆಂದ ಸಿಎಂ

ಡಾ. ಕೆ.ಎಂ.ಎಸ್ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ , ಅಭಿನಂದನಾ ಗ್ರಂಥದ ಸಂಪಾದಕರಾದ ಎಚ್.ದಂಡಪ್ಪ, ಶ್ರೀನಿವಾಸ್ ಜಿ.ಕಪ್ಪಣ್ಣ ಸೇರಿ ಹಲವರು ಉಪಸ್ಥಿತರಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version