Site icon Vistara News

Karnataka Election 2023: ಯಲಬುರ್ಗಾದಲ್ಲಿ ಅಭ್ಯರ್ಥಿಗಳಿಂದ ಹಣ ಹಂಚಿಕೆ; ಚುನಾವಣಾ ಆಯೋಗಕ್ಕೆ ದೂರು

Karnataka election 2023 Strong candidates in Yalaburga constituency trying to attract votes through money lures Complaint to Election Commission

ಕುಕನೂರು: ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳು ಹಣ ನೀಡುವ ಮೂಲಕ ಹಾಗೂ ಆಮಿಷಗಳನ್ನು ಒಡ್ಡುವ ಮೂಲಕ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದು, ಅದನ್ನು ತಡೆಯುವಂತೆ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಪಕ್ಷೇತರ ಅಭ್ಯರ್ಥಿ ಶಂಕರರಡ್ಡಿ ಸೋಮರಡ್ಡಿ ಹೇಳಿದರು. ಕುಕನೂರು ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: IPL 2023: ನಾಲ್ಕು ವರ್ಷಗಳ ಬಳಿಕ ಸೇಡು ತೀರಿಸಿದ ಚೆನ್ನೈ; ಮುಂಬೈ ವಿರುದ್ಧ 6 ವಿಕೆಟ್​​ ಗೆಲುವು

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಪ್ರಬಲ ಅಭ್ಯರ್ಥಿಗಳಿಂದ ಹಣ ನೀಡುವ ಮೂಲಕ ಹಾಗೂ ಗ್ರಾಮದ ದೇವಸ್ಥಾನಗಳಿಗೆ, ಯುವಕ ಸಂಘ, ಸಂಸ್ಥೆಗಳಿಗೆ ದೇಣಿಗೆ ನೀಡುವ ಮೂಲಕ ಮತದಾರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇಂತಹ ಆಸೆ ಆಮಿಷವೊಡ್ಡುವುದನ್ನು ತಡೆಯುವಂತೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

Exit mobile version