Site icon Vistara News

Students Drown: ಕೆಆರ್​ಎಸ್ ಹಿನ್ನೀರಿನಲ್ಲಿ ಈಜುವ ಸಾಹಸ; ಮೂವರು ವಿದ್ಯಾರ್ಥಿಗಳ ಸಾವು

Students Drown

ಮೈಸೂರು: ಕೆ. ಆರ್.ಸಾಗರ (ಕೃಷ್ಣರಾಜ ಸಾಗರ)ದ ಹಿನ್ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ (Students Drown). ಮೈಸೂರಿನ ಸಂತ ಜೋಸೆಫ್​ ಕಾಲೇಜಿನ ವಿದ್ಯಾರ್ಥಿಗಳಾದ ಪ್ರವೀಣ್​, ವರುಣ್​, ಭರತ್​ ಮೃತರು. ಇವರೆಲ್ಲ ಬಿಸಿಎ ಎರಡನೇ ವರ್ಷದಲ್ಲಿ ಓದುತ್ತಿದ್ದರು.

ಪ್ರವೀಣ್​, ಭರತ್​, ವರುಣ್​ ಮತ್ತಿತರ ಸ್ನೇಹಿತರೆಲ್ಲ ಸೇರಿ ಪಿಕ್ನಿಕ್​​ಗೆಂದು ಮೀನಾಕ್ಷಿಪುರದಲ್ಲಿರುವ ಕೃಷ್ಣರಾಜಸಾಗರ ಹಿನ್ನೀರಿನ ಬಳಿ ತೆರಳಿದ್ದರು. ಪಡವಾರಳ್ಳಿ, ರಾಮಕೃಷ್ಣನಗರ, ಬಲ್ಲೇನಹಳ್ಳಿ ನಿವಾಸಿಗಳಾದ ಇವರು ಕೆಆರ್​ಎಸ್​ಗೆ ಹೋಗಿದ್ದಲ್ಲದೆ, ಅಲ್ಲಿ ಹಿನ್ನೀರಿನಲ್ಲಿ ಈಜಲು ಮುಂದಾಗಿದ್ದಾರೆ. ಆದರೆ ನೀರಿನ ಸೆಳೆತ ಜಾಸ್ತಿ ಇದ್ದಿದ್ದರಿಂದ ಈಜಲು ಸಾಧ್ಯವಾಗದೆ, ಮುಳುಗಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Drowned in Pond: ಸೆಕೆ ತಾಳಲಾರದೆ ಕೆರೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು

ಜೂನ್​ನಲ್ಲಿ ಕೂಡ ಇದೇ ಜಾಗದಲ್ಲಿ ಇಬ್ಬರು ಎಂಜಿನಿಯರ್ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು. ಕೆಆರ್​ಎಸ್​ ಹಿನ್ನೀರಿನಲ್ಲಿ ಈಜಲೆಂದು ಬಂದಿದ್ದ ಚಿರಂತ್​ ಮತ್ತು ಸುನೀಲ್ ಎಂಬುವರು ಮುಳುಗಿ ಮೃತಪಟ್ಟಿದ್ದರು. ಇದರಲ್ಲಿ ಚಿರಂತ್ ಹಾಸನದವನಾಗಿದ್ದರೆ, ಸುನೀಲ್ ಬೀದರ್​​ನವನಾಗಿದ್ದ. ಮೈಸೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹುಡುಗರು ಅಂದು ಅರ್ಧಗಂಟೆ ಚೆನ್ನಾಗಿಯೇ ಈಜಿದ್ದರು. ಆದರೆ ಒಮ್ಮೆಲೇ ಪ್ರವಾಹದ ಸೆಳೆತಕ್ಕೆ ಸಿಲುಕಿ, ಮುಳುಗಿದ್ದರು. ಕೂಡಲೇ ರಕ್ಷಣೆಗೆ ಮುಂದಾದರೂ, ಇಬ್ಬರೂ ಬದುಕಿರಲಿಲ್ಲ.

Exit mobile version