Site icon Vistara News

Suicide Attempt: ಸರಗಳ್ಳತನ ಮಾಡಿ ಲಾಕ್‌ ಆಗಿದ್ದ ಕಳ್ಳ ಪೊಲೀಸ್ ಠಾಣೆಯಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನ

Suicide Case

ಬೆಂಗಳೂರು: ಇಲ್ಲಿನ ರಾಜಗೋಪಾಲ ನಗರ ಪೊಲೀಸ್‌ ಠಾಣೆಯಲ್ಲಿ ಸರಗಳ್ಳತನ (Suicide Attempt) ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಅಬ್ರಾರ್ ಅಲಿಯಾಸ್‌ ಬಾಷ ಎಂಬಾತ ಆತ್ಮಹತ್ಯಗೆ ಯತ್ನಿಸಿದ ಆರೋಪಿ ಆಗಿದ್ದಾನೆ.

ಪೊಲೀಸ್ ಕಾನ್‌ಸ್ಟೇಬಲ್‌ ಪ್ರಕಾಶ್ ಅವರು ಆರೋಪಿ ಅಬ್ರಾರ್‌ನ ಹ್ಯಾಂಡ್ ಕಪ್ ಹಾಗು ಲೀಡಿಂಗ್ ಚೈನ್ ಹಾಕಿ ಶೌಚಾಲಯಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಶೌಚಕ್ಕೆ ಹೋಗುವಂತೆ ಒಳ ಹೋದ ಆರೋಪಿ ಅಲ್ಲಿಂದ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ನೋಡಿದ ಪಿಸಿ ಪ್ರಕಾಶ್‌ ತಕ್ಷಣ ಬಾಟಲ್ ಕಿತ್ತೆಸೆದು, ಹೆಗ್ಗನಹಳ್ಳಿಯಲ್ಲಿರುವ ಜೈಮಾರುತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: Santro Ravi case: ಸ್ಯಾಂಟ್ರೊ‌ ರವಿ ಆತ್ಮಹತ್ಯೆ ಯತ್ನ ಕಟ್ಟುಕಥೆಯಾ? ಅನುಮಾನಕ್ಕೆ ಕಾರಣವಾಯ್ತು ಪೊಲೀಸ್‌ ನಡೆ

ಕಳೆದ ಡಿಸೆಂಬರ್‌ನಲ್ಲಿ ಶ್ವೇತಾ ಎಂಬುವವರ ಸರಗಳ್ಳತನ ಮಾಡಿ ಅಬ್ರಾರ್ ಪರಾರಿ ಆಗಿದ್ದ. ಈ ಸಂಬಂಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ತನಿಖೆಗಿಳಿದ ರಾಜಗೋಪಾಲನಗರ ಪೊಲೀಸರು ಅಬ್ರಾರ್‌ನನ್ನು ಬಂಧಿಸಿ ಕರೆ ತಂದಿದ್ದಾಗ, ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Exit mobile version