Site icon Vistara News

Suicide Case | ಪತ್ನಿಯ ಸಾವಿನಿಂದ ಮನನೊಂದು ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

Suicide Case

ಚಿಕ್ಕೋಡಿ : ಪತ್ನಿಯ ಸಾವಿನಿಂದ ಮನನೊಂದು ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಪತಿ ಚಿಕಿತ್ಸೆ ಫಲಕಾರಿಯಾಗದೇ (Suicide Case) ಮೃತಪಟ್ಟಿದ್ದಾರೆ. ಸದಾಶಿವ ರಾಮಪ್ಪ ಕಾಂಬಳೆ(೨೬) ಮೃತ ದುರ್ದೈವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಪ್ರಕರಣ ಸಂಭವಿಸಿದೆ. ಕಳೆದ ಎರಡು ದಿನದ ಹಿಂದೆ ಅನಾರೋಗ್ಯದಿಂದ ಸದಾಶಿವರ ಪತ್ನಿ ರೂಪಾ ಅಕಾಲಿಕ ನಿಧನ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಮನನೊಂದು ಸದಾಶಿವ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ | ಶಾಪಿಂಗ್‌ ಕರೆದುಕೊಂಡು ಹೋಗದಿದ್ದಕ್ಕೆ ಮುನಿಸಿಕೊಂಡ ಬಾಲಕಿ ಆತ್ಮಹತ್ಯೆ

ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಸದಾಶಿವ ಅವರ ದೇಹ 80%ರಷ್ಟು ಸುಟ್ಟು ಹೋಗಿತ್ತು ಎನ್ನಲಾಗಿದೆ. ಸದಾಶಿವ ಸಂಬಂಧಿಕರು ಕೂಡಲೇ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ತಡರಾತ್ರಿ ಚಿಕಿತ್ಸೆ ಫಲಿಸದೆ ಸದಾಶಿವ ಮೃತಪಟ್ಟಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

Exit mobile version