Site icon Vistara News

Suicide Case | ಪರಸ್ತ್ರೀ ವ್ಯಾಮೋಹದಲ್ಲಿ ಹುಚ್ಚನಂತಾದ ವಿವಾಹಿತ ನೇಣಿಗೆ ಶರಣು

hanging

ಚಿಕ್ಕಬಳ್ಳಾಪುರ: ಇಲ್ಲಿನ ಕೋಟೆ ಬಡಾವಣೆಯ ವಿವಾಹಿತನೊಬ್ಬ ವಿವಾಹಿತೆಯೊಬ್ಬಳ ಮೋಹಕ್ಕೆ ಸಿಲುಕಿ ಪ್ರಾಣವನ್ನೇ (Suicide Case) ಕಳೆದುಕೊಂಡಿದ್ದಾನೆ. ನವೀನ್‌ (27) ಎಂಬಾತ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ. ನವೀನ್‌ಗೆ ಮದುವೆಯಾಗಿ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದರೂ ಪರಸ್ತ್ರೀಯೊಬ್ಬಳ ವ್ಯಾಮೋಹಕ್ಕೆ ಸಿಲುಕಿದ್ದ ಎನ್ನಲಾಗಿದೆ. ಎಷ್ಟರ ಮಟ್ಟಿಗೆ ಹುಚ್ಚು ಪ್ರೇಮಿಯಾಗಿದ್ದ ಎಂದರೆ ವಿವಾಹಿತೆ ದೀಪಾಳ ಪತಿಯ ಎದುರಿಗೇ ಆಕೆ ಬಳಿ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದು ನ್ಯಾಯ ಪಂಚಾಯಿತಿ ಸಹ ಆಗಿತ್ತು ಎಂದು ಹೇಳಲಾಗಿದೆ.

ಈ ನಡುವೆ ವಿವಾಹಿತೆ ದೀಪಾ, ನವೀನ್ ಕಾಟ ತಾಳಲಾರದೆ ಮೊಬೈಲ್‌ ಫೋನ್ ಬಳಸುವುದನ್ನು ಬಿಟ್ಟಿದ್ದಳಂತೆ. ದೀಪಾಳನ್ನು ಬಿಟ್ಟು ಇರಲಾಗದೆ ನವೀನ್ ನೇಣು ಬಿಗಿದುಕೊಂಡಿದ್ದಾನೆ. ಮೃತನ ಸಂಬಂಧಿಕರು ದೀಪಾ ವಿರುದ್ಧ ಕಿಡಿಕಾರಿದ್ದಾರೆ. ಆದರೆ ನನಗೂ ಆತನ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ದೀಪಾ ಹೇಳಿದ್ದಾರೆ. ನವೀನ್‌ ತಾಯಿ ಕಾಶಿ ಯಾತ್ರೆಗೆ ಹೋಗಿದ್ದು, ಮನೆಯಲ್ಲಿಯೂ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಐ ಲವ್‌ ಯೂ ಎಂದಿದ್ದಳು
ಮೊದ ಮೊದಲು ವಿವಾಹಿತೆ ದೀಪಾ ನವೀನ್ ಪ್ರೀತಿಯನ್ನು ನಿರಾಕರಿಸಿದ್ದಳಂತೆ. ನಂತರ ನವೀನ್‌ನ ಹುಚ್ಚು ಪ್ರೀತಿಗೆ ಮನಸೋತು ಈಕೆಯೂ ಲವ್ ಯೂ ಎಂದು ಮೇಸೆಜ್ ಮಾಡಿದ್ದಳೆಂಬ ಆರೋಪ ಕೇಳಿಬಂದಿದೆ. ಸದ್ಯ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ವಿವಾಹಿತನೊಬ್ಬನ ಹುಚ್ಚಾಟದಿಂದ ಈಗ ತಾಯಿ, ಹೆಂಡತಿ, ಮಕ್ಕಳಿಬ್ಬರು ಅನಾಥರಾಗಿದ್ದಾರೆ.

ಇದನ್ನೂ ಓದಿ | Suicide Case | ತಾಯಿಯ ಅಕ್ರಮ ಸಂಬಂಧಕ್ಕೆ ಮನನೊಂದು ಮಗ ಆತ್ಮಹತ್ಯೆ

Exit mobile version