Site icon Vistara News

Suicide Case: ಹೈನುಗಾರಿಕೆಯಲ್ಲಿ ನಷ್ಟ; ಬೇಸತ್ತ ಯುವಕ ಆತ್ಮಹತ್ಯೆಗೆ ಶರಣು

Suicide Case

ಉಡುಪಿ: ಇಲ್ಲಿ ಕಾರ್ಕಳ ಸಮೀಪ ಮರ್ಣೆ ಗ್ರಾಮದ ಕುರ್ಪಾಡಿ ಎಂಬಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ (Suicide Case) ಶರಣಾಗಿದ್ದಾರೆ. ಕುರ್ಪಾಡಿ ನಿವಾಸಿ ಶ್ರೀನಿವಾಸ ಪೂಜಾರಿ (25) ಮೃತ ದುರ್ದೈವಿ.

ಶ್ರೀನಿವಾಸ ವೆಲ್ಡಿಂಗ್ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಅದರ ಜತೆಗೆ ಹೈನುಗಾರಿಕೆ ಮಾಡುತ್ತಿದ್ದರು. ಆದರೆ ಹೈನುಗಾರಿಕೆ ಉದ್ಯಮದಲ್ಲಿ ನಷ್ಟ ಅನುಭವಿಸಿದ ಚಿಂತೆಯಲ್ಲಿ ನಿತ್ಯ ಕೊರಗುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Viral Video: ಹಿರಿಯ ನಾಗರಿಕನೊಂದಿಗೇ ರಸ್ತೆ ದಾಟಿದ ಕರ್ಮಫಲ; ಗಹಗಹಿಸಿ ನಕ್ಕ ವಾಹನ ಚಾಲಕ!

ಸತತ ನಷ್ಟದಿಂದಾಗಿ ಭಾನುವಾರ ಮನೆ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Exit mobile version