Site icon Vistara News

Suicide Case: ಪ್ರೇಮಿಗಳ ದಿನದಂದೇ ನಂದಿ ಬೆಟ್ಟದ ಟಿಪ್ಪು ಡ್ರಾಪ್‌ನಿಂದ ಧುಮುಕಿ ಯುವಕ ಆತ್ಮಹತ್ಯೆ

Youth commits suicide by jumping from Tipu Drop on Nandi Hills on Valentine's Day

#image_title

ಚಿಕ್ಕಬಳ್ಳಾಫುರ: ತಾಲೂಕಿನ ನಂದಿ ಗಿರಿಧಾಮದಲ್ಲಿ ಟಿಪ್ಪು ಡ್ರಾಪ್‌ನಿಂದ ಧುಮುಕಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮಿಗಳ ದಿನವೇ ನಂದಿಬೆಟ್ಟದಲ್ಲಿ ಯುವಕನ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿರುವುದರಿಂದ ಆತ್ಮಹತ್ಯೆಗೆ (Suicide Case) ಪ್ರೇಮ ವೈಫಲ್ಯ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿ ಗ್ರಾಮದ ಅರುಣ್ ಕುಮಾರ್ (೨೨) ಮೃತ ಯುವಕ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ‌ ಮಾಡುತ್ತಿದ್ದ ಅರುಣ್ ಕಳೆದ ಮೂರು ದಿನಗಳಿಂದ ಹಿಂದೆಯೇ ಗಿರಿಧಾಮಕ್ಕೆ ಬಂದಿದ್ದ ಎನ್ನಲಾಗಿದೆ.

ಇದನ್ನೂ ಓದಿ | Operation Tiger : ಆಪರೇಷನ್‌ ಟೈಗರ್‌ ಸಕ್ಸಸ್‌; ಕೊಡಗಿನಲ್ಲಿ ಇಬ್ಬರನ್ನು ಬಲಿ ಪಡೆದ ನರಹಂತಕ ಹುಲಿ ಕೊನೆಗೂ ಸೆರೆ

ಗಿರಿಧಾಮದ ಪಾರ್ಕಿಂಗ್‌ನಲ್ಲಿ ಯುವಕನ ಬೈಕ್‌ ನಿಲ್ಲಿಸಲಾಗಿದ್ದು, ಟಿಪ್ಪು ಡ್ರಾಪ್‌ ಬಳಿ ಬ್ಯಾಗ್‌ ಪತ್ತೆಯಾಗಿದೆ. ಅದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಯುವಕ ಬರೆದಿರುವ ಡೆತ್‌ನೋಟ್‌ ಪತ್ತೆಯಾಗಿದೆ. ನಂದಿ ಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Exit mobile version