Site icon Vistara News

13 ಎಕರೆ ಡಿನೋಟಿಫಿಕೇಶನ್‌ಗೆ ಆದೇಶ ಪ್ರಕರಣ, ರಾಜ್ಯ ಸರ್ಕಾರ, ನೈಸ್‌ ಸಂಸ್ಥೆಗೆ ಸುಪ್ರೀಂ ಕೋರ್ಟ್‌ ನೋಟಿಸ್

Supreme Court

Supreme Court Strikes Down Electoral Bonds Scheme: What Are The Reasons? What is the Scheme?

ನವದೆಹಲಿ: ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ (NICE) ಯೋಜನೆ ಅನ್ವಯ ೧೩ ಎಕರೆಗೂ ಹೆಚ್ಚಿನ ಜಮೀನಿನ ಡಿನೋಟಿಫಿಕೇಶನ್‌ಗೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಹಾಗೂ ನೈಸ್‌ ಸಂಸ್ಥೆಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.

ಡಿನೋಟಿಫಿಕೇಶನ್‌ ಆದೇಶ ಪ್ರಶ್ನಿಸಿ ಸುಜಾತ ವಿಜಯ್‌ ಹಾಗೂ ಇನ್ನೊಬ್ಬರ ಪರವಾಗಿ ಬಾಲಾಜಿ ಶ್ರೀನಿವಾಸನ್‌ ಎಂಬುವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಎಂ.ಎಂ.ಸುಂದರೇಶ್‌ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿತು. ಆರು ವಾರಗಳಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರ ಹಾಗೂ ನೈಸ್‌ ಸಂಸ್ಥೆಗೆ ಸೂಚಿಸಿತು.

ಜಮೀನು ಸ್ವಾಧೀನ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯವರೆಗೆ ಯಥಾಸ್ಥಿತಿ ಕಾಪಾಡಬೇಕು ಎಂದೂ ಕೋರ್ಟ್‌ ಆದೇಶಿಸಿದೆ. ಹಾಗೆಯೇ, ಆಗಸ್ಟ್‌ನಲ್ಲಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಡಿನೋಟಿಫಿಕೇಶನ್‌ ಆದೇಶ ಪ್ರಶ್ನಿಸಿ ಸುಜಾತಾ ಹಾಗೂ ಇನ್ನೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ತಿರಸ್ಕರಿಸಿತ್ತು.

ಇದನ್ನೂ ಓದಿ: Hijab Row: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೋರಿದ ಸ್ಟೂಡೆಂಟ್ಸ್, ಶೀಘ್ರವೇ ತ್ರಿಸದಸ್ಯ ಪೀಠ ರಚನೆ ಎಂದ ಸುಪ್ರೀಂ ಕೋರ್ಟ್

Exit mobile version