Site icon Vistara News

Karnataka election 2023: ನಾರಾ ಭರತ್ ರೆಡ್ಡಿಗೆ ಮತ ನೀಡಿ; ವೀರಶೈವ ಲಿಂಗಾಯತರಿಗೆ ಸೂರ್ಯನಾರಾಯಣ ರೆಡ್ಡಿ ಮನವಿ

Karnataka election 2023 Suryanarayan Reddy appeals to Veerashaiva Lingayats to vote for Congress candidate Nara Bharat Reddy

ಬಳ್ಳಾರಿ: ನಗರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡುವಂತೆ ಮಾಜಿ‌ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ನಗರದ ವೀರಶೈವ ಲಿಂಗಾಯತ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ಇಲ್ಲಿನ ಬಸವೇಶ್ವರ ನಗರದ ರಾಷ್ಟ್ರೀಯ ಬಸವ ದಳದಲ್ಲಿ ಸೋಮವಾರ ನಡೆದ ಮೇ ದಿನಾಚರಣೆ ಹಾಗೂ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಹಿತ ಕಾಯುವ ಪಕ್ಷ, ಯಾವುದೇ ತಾರತಮ್ಯ ಮಾಡದೇ ಎಲ್ಲ ಜನರಿಗೂ ಅಧಿಕಾರ, ಅವಕಾಶ ನೀಡಿದ ಪಕ್ಷ ಎಂದು ತಿಳಿಸಿದರು.

ಇದನ್ನೂ ಓದಿ: Go First airline : ಗೋ ಫಸ್ಟ್‌ ಏರ್‌ಲೈನ್ಸ್ ದಿವಾಳಿ ಘೋಷಣೆ, ವಿಮಾನ ಸಂಚಾರ ಮೇ 3,4ಕ್ಕೆ ರದ್ದು

ಬಳ್ಳಾರಿ ನಗರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾರಾ ಭರತ್ ರೆಡ್ಡಿಗೆ ಮತ ನೀಡುವಂತೆ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದರು. ಸಭೆಯಲ್ಲಿ ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳು, ಲಿಂಗಾಯತ ಬಣಜಿಗ ಕ್ಷೇಮಾಭಿವೃದ್ಧಿ ಸಂಘ, ಸಮುದಾಯದ ಮುಖಂಡರು ಇದ್ದರು.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಸಾಹುಕಾರ್ ಸತೀಶಬಾಬು, ಚಿತ್ರಕಿ ಪಂಚಪ್ಪ, ರೂಪನಗುಡಿ ನಾಗರಾಜ್, ಶಿವಾನಂದ, ಖೇಣಿ ಬಸಪ್ಪ, ಕಮ್ಮರಚೇಡು ತಿಪ್ಪರುದ್ರಪ್ಪ, ನಿಷ್ಠಿ ರುದ್ರಪ್ಪ, ಬೈಲುವದ್ದಿಗೇರಿ ಯರ್ರಿಸ್ವಾಮಿ, ಚಾನಾಳ್ ಶೇಖರ್, ಅಂಗಡಿ ಶಂಕರ್, ತೋಟದ ವೀರೇಶ್, ಮಂಜು ಬಳಿಗೇರ, ಅಂದ್ರಾಳ್ ಶಿವರಾಜ್ ಸೇರಿದಂತೆ ಇತರು ಪಾಲ್ಗೊಂಡಿದ್ದರು.‌

Exit mobile version