Site icon Vistara News

ಅಂದು ನಂಗಾನಾಚ್​ ಇಂದು ಮಾರಾಮಾರಿ; ಟಿ.ಚೆನ್ನಾಪುರದಲ್ಲಿ ಯುವಕನ ಮೇಲೆ ಲಾಂಗ್​​ನಿಂದ ಅಟ್ಯಾಕ್​​

Sword Attack On Youth In Mandya

#image_title

ಮಂಡ್ಯ: ಇತ್ತೀಚೆಗಷ್ಟೇ ನಂಗಾನಾಚ್​ ಕಾರ್ಯಕ್ರಮ (ಅರೆ ನಗ್ನ ಹುಡುಗಿಯರ ನೃತ್ಯ ) ನಡೆದಿದ್ದ ಮಂಡ್ಯದ ಟಿ.ಚೆನ್ನಾಪುರ ಗ್ರಾಮದಲ್ಲಿ ತಡರಾತ್ರಿ ಯುವಕರ ಮಾರಾಮಾರಿ ನಡೆದಿದೆ. ಅಭಿ ಎಂಬ ಯುವಕನ ಮೇಲೆ ಲಾಂಗ್​ನಿಂದ ಗಂಭೀರವಾಗಿ ಹಲ್ಲೆ ಮಾಡಲಾಗಿದ್ದು, ಆತನನ್ನು ನಿಮ್ಹಾನ್ಸ್​ಗೆ ದಾಖಲು ಮಾಡಲಾಗಿದೆ. ಸ್ಥಳೀಯ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ಮಂಡ್ಯದ ನಾಗಮಂಗಲ ತಾಲೂಕಿನ ಟಿ.ಚೆನ್ನಾಪುರ ಗ್ರಾಮದಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಗ್ರಾಮ ದೇವತೆ ಹಬ್ಬದ ನೆಪದಲ್ಲಿ ನಂಗಾನಾಚ್​ ನಡೆದಿತ್ತು. ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡರ ಅಧ್ಯಕ್ಷತೆಯಲ್ಲಿ, ಅವರ ಬೆಂಬಲಿಗರಿಂದ ಈ ನೃತ್ಯ ಆಯೋಜನೆಯಾಗಿತ್ತು. ಹಾಗಂತ ಈಗ ಯುವಕರ ನಡುವೆ ನಡೆದ ಮಾರಾಮಾರಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕೇಸ್​ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಮತದಾರರನ್ನು ಸೆಳೆಯಲು ಮಂಡ್ಯದಲ್ಲಿ ಅರೆನಗ್ನ ಹುಡುಗಿಯರ ರಸಮಂಜರಿ!‌

Exit mobile version