Site icon Vistara News

Siddaramotsava | ವಿದ್ಯಾರ್ಥಿಗಳಿಗೆ ತಟ್ಟಿದ ಸಿದ್ದರಾಮೋತ್ಸವದ ಬಿಸಿ; ರಸ್ತೆ ತಡೆದು ಪ್ರತಿಭಟನೆ

ವಿದ್ಯಾರ್ಥಿಗಳಿಗೂ ತಟ್ಟಿದ ಸಿದ್ಧರಾಮೋತ್ಸವದ ಬಿಸಿ

ಗದಗ: ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಸಿದ್ದರಾಮೋತ್ಸವ (Siddaramotsava) ಕಾರ್ಯಕ್ರಮಕ್ಕೆ ಸಾವಿರಾರು KSRTC ಬಸ್‌ಗಳು ತೆರಳಿರುವ ಕಾರಣ ಲಕ್ಷ್ಮೇಶ್ವರ ಪಟ್ಟಣದಿಂದ ಗದಗ ನಗರಕ್ಕೆ ಬರಬೇಕಾದ ಬಸ್‌ಗಳು ಸಮರ್ಪಕವಾಗಿ ಬಂದಿಲ್ಲ. ಈ ಕಾರಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿ ದಿಢೀರ್‌ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಬಸ್‌ಗಳ ಕೊರತೆ ಉಂಟಾಗಿ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು ಹಾಗೂ ನೌಕರಸ್ಥರು ರಸ್ತೆ ತಡೆದರು.

ರಾಜ್ಯದ ಬಹುತೇಕ ಡಿಪೋಗಳಲ್ಲಿ ಬುಧವಾರ KSRTC ಬಸ್‌ಗಳ ಕೊರತೆ ಉಂಟಾಯಿತು. ಈ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ| Video | ಸಿದ್ದರಾಮಯ್ಯ @75: ಸಿದ್ದರಾಮೋತ್ಸವಕ್ಕೂ ಮುನ್ನ ಒಂದು ಸಿಪ್‌ ಬಿಯರ್‌

Exit mobile version