Site icon Vistara News

Theft Case: ಮಾಲೀಕನ ಎದುರೇ ಸ್ಕೂಟರ್ ಎಗರಿಸಿದ ಖತರ್ನಾಕ್‌ ಕಳ್ಳ; ಜ್ಯೂಸ್‌ ಕುಡಿಯಲು ಹೋದಾಗ ಮಾಯ!

#image_title

ಉಡುಪಿ: ರಾಜ್ಯದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು (Theft Case) ಹೆಚ್ಚಾಗುತ್ತಿವೆ. ಕಣ್ಣು ಮುಚ್ಚಿ ತೆರೆಯುವುದರ ಒಳಗೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರನೊಬ್ಬ ಜ್ಯೂಸ್‌ ಕುಡಿಯಲೆಂದು ಗಾಡಿ ಸೈಡ್‌ಗೆ ಹಾಕಿ ಹೋಗಿದ್ದು, ಆತನ ಎದುರೇ ವಾಹನ ಕದ್ದು ಪರಾರಿ ಆಗಿರುವ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣದ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಕೋಟ ಸಮೀಪದ ಉಪ್ಲಾಡಿ ನಿವಾಸಿ ರವಿ ಅವರು ಸಾಲಿಗ್ರಾಮ ಪೇಟೆಯಲ್ಲಿರುವ ಐಸ್ ಸ್ಪೈಸ್ ರೆಸ್ಟೋರೆಂಟ್ ಮುಂಭಾಗ ಸ್ಕೂಟರ್‌ ನಿಲ್ಲಿಸಿ ಜ್ಯೂಸ್ ಕುಡಿಯುತ್ತಿದ್ದರು. ಪಕ್ಕದಲ್ಲೇ ಸ್ಕೂಟರ್ ಇದ್ದರಿಂದ ಸ್ಕೂಟರ್‌ ಕೀಯನ್ನು ಅಲ್ಲೇ ಇರಿಸಿದ್ದರು. ಇದೆಲ್ಲವನ್ನು ಮೊದಲೇ ಗಮನಿಸಿದ್ದ ಕಳ್ಳನೊಬ್ಬ ಸ್ಕೂಟರ್ ಸ್ಟಾರ್ಟ್‌ ಮಾಡಿಕೊಂಡು ಮಾಲೀಕನ ಎದುರಿಗೆ ಎಸ್ಕೇಪ್ ಆಗಿದ್ದಾನೆ. ಏ.9ರ ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ.

ಇದನ್ನೂ ಓದಿ: Karnataka Election 2023: ಮತದಾರರಿಗೆ ಸೀರೆ ಹಂಚಿದ ಮುನಿರತ್ನ ಬೆಂಬಲಿಗರು; ಸಚಿವರ ವಿರುದ್ಧ 3ನೇ ಎಫ್‌ಐಆರ್ ದಾಖಲು

ಸ್ಕೂಟರ್‌ನ ಪೆಟ್ರೋಲ್‌ ಟ್ಯಾಂಕ್ ಪೂರ್ತಿ ಇದ್ದು ಜತೆಗೆ 5 ಲೀಟರ್ ತೆಂಗಿನ ಎಣ್ಣೆ ಕ್ಯಾನ್ ಇತ್ತು. ಕಳ್ಳತನದ ಕೃತ್ಯವೆಲ್ಲ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ.

Exit mobile version