Site icon Vistara News

ಹೋದ ಮೂವರು ಬಾಲಕರು ಜಲ ಸಮಾಧಿ, ಶಾಲೆಗೆ ಹೋದವರೆಲ್ಲಿ ಎಂದು ಹುಡುಕಿದಾಗ ಸಿಕ್ಕಿದ್ದು ಹೆಣ

drowning in talakadu

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋಡೆಗಂಡ್ಲು ಗ್ರಾಮದ ಮೂವರು ಬಾಲಕರು ಕೆರೆಯಲ್ಲಿ ಈಜಲು ಹೋಗಿ ನೀರುಪಾಲಾಗಿದ್ದಾರೆ.
ಕೋಡೆಗಂಡ್ಲು ಗ್ರಾಮದ ವೆಂಕಟೇಶ್ ಅವರ ಅವಳಿ ಮಕ್ಕಳಾದ 10 ವರ್ಷದ ರಾಮ ಮತ್ತು ಲಕ್ಷ್ಮಣ್ ಹಾಗೂ ಅದೇ ಗ್ರಾಮದ ಮುನಿರಾಜು ಎಂಬವರ ಮಗ ೯ ವರ್ಷದ ಪ್ರಜ್ವಲ್‌ ಮೃತರು. ರಾಮ ಮತ್ತು ಲಕ್ಷ್ಮಣ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದರೆ, ಪ್ರಜ್ವಲ್‌ ಮೂರನೇ ತರಗತಿಯಲ್ಲಿದ್ದ.

ಈ ಮೂವರು ಬಾಲಕರು ಬೆಳಗ್ಗೆ ಶಾಲೆಗೆ ಹೋಗಿದ್ದು ಸಂಜೆ ಮನೆಗೆ ಬಾರದ ಹಿನ್ನೆಲೆ ಪೋಷಕರು ಮಕ್ಕಳನ್ನು ಹುಡುಕಿಕೊಂಡು ಹೋದಾಗ ಅವರಿಗೆ ಸಿಕ್ಕಿದ್ದು ಸಾವಿನ ಸುದ್ದಿ. ಬಾಲಕರ ಬಟ್ಟೆ ಮತ್ತು ಪುಸ್ತಕಗಳು ಕೆರೆ ದಡದಲ್ಲಿ ಕಂಡಿದ್ದು ಅನುಮಾನಗೊಂಡು ಪೋಷಕರು ಹಾಗೂ ಗ್ರಾಮಸ್ಥರು ನೀರಿನಲ್ಲಿ ಇಳಿದು ಹುಡುಕಾಡಿದಾಗ ಶವಗಳು ದೊರೆತ್ತಿವೆ. ಗ್ರಾಮಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇನ್ನು ಸ್ಥಳಕ್ಕೆ ಭೇಟಿ ನೀಡಿದ ಕೆಂಚರ‍್ಲಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್‌ ಪುರುಷೋತ್ತಮ್, ಪಿಎಸ್ ಐ ನಾರಾಯಣಪ್ಪ ಸಿಬ್ಬಂದಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿ ಶವಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ರವಾನಿಸಿದ್ದಾರೆ, ಇನ್ನು ಸಾವನಾಪ್ಪಿರುವ ಮಕ್ಕಳನ್ನು ಕಂಡ ಕುಟುಂಬದವರ ಅಕ್ರಂದನ ಮಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ಸೂತಕ ಛಾಯೆ ಮೂಡಿದೆ.

ಇದನ್ನೂ ಓದಿ| ಸೆಲ್ಫಿ ತೆಗೆಯಲು ಹೋದ ಕಾಲೇಜು ವಿದ್ಯಾರ್ಥಿಗಳಿಬ್ಬರು ನೀರುಪಾಲು

Exit mobile version