Site icon Vistara News

ದುಷ್ಕರ್ಮಿಗಳಿಂದ ರೈತನ 800 ಅಡಕೆ ಗಿಡಗಳ ನಾಶ

ನಾಶ ಮಾಡಿದ ದುಷ್ಕರ್ಮಿಗಳು

ತುಮಕೂರು: ತುಮಕೂರಿನ ಚಿಕ್ಕಹೊನ್ನುಡಿಕೆ ಗ್ರಾಮದಲ್ಲಿ ರೈತರೊಬ್ಬರು ಬೆಳೆದ ಅಡಕೆ ಗಿಡಗಳನ್ನು ದುಷ್ಕರ್ಮಿಗಳು ನಾಶಪಡಿಸಿದ್ದಾರೆ. ಈ ಅಡಕೆ ಗಿಡಗಳು ಗ್ರಾಮದ ಶ್ರೀನಿವಾಸಯ್ಯ ಎಂಬುವರಿಗೆ ಸೇರಿದಾಗಿತ್ತು. ಸುಮಾರು 800 ಗಿಡಗಳನ್ನು ದುಷ್ಕರ್ಮಿಗಳು ನಾಶಪಡಿಸಿದ್ದರಿಂದ ಶ್ರೀನಿವಾಸಯ್ಯ ಈಗ ಕಂಗಾಲಾಗಿದ್ದಾರೆ.

ಎರಡು ವರ್ಷಗಳಿಂದ ಬೆಳೆದಿದ್ದ ಈ ಅಡಕೆ‌ ಗಿಡಗಳನ್ನು ವೈಯಕ್ತಿಕ ದ್ವೇಷದ ಕಾರಣ ನಾಶ ಮಾಡಿರಬಹುದು ಎನ್ನುವ ಶಂಕೆ ಉಂಟಾಗಿದೆ. ದುಷ್ಕರ್ಮಿಗಳು ರಾತ್ರೋರಾತ್ರಿ ಜಮೀನುಗಳಿಗೆ ನುಗ್ಗಿ ಇವುಗಳನ್ನು ಹಾಳುಗೆಡವಿದ್ದಾರೆ. ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ.

ಇದನ್ನೂ ಓದಿ: ಹೊಲವನ್ನೆ ನಾಶ ಮಾಡುತ್ತಿರುವ ಸೈನಿಕ ಹುಳುಗಳು

Exit mobile version