Site icon Vistara News

Electric shock | ಪಾರಿವಾಳ ಹಿಡಿಯೊ ಭರದಲ್ಲಿ ಹೈಟೆನ್ಶನ್‌ ತಂತಿ ತಗುಲಿ ಇಬ್ಬರು ಬಾಲಕರಿಗೆ ಗಾಯ

Electric Shock

ಬೆಂಗಳೂರು: ಪಾರಿವಾಳ ಹಿಡಿಯುವ ಆತುರದಲ್ಲಿದ್ದ ಇಬ್ಬರು ಬಾಲಕರು ವಿದ್ಯುದಾಘಾತಕ್ಕೆ (Electric shock) ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಂದ್ರು(10), ಸುಪ್ರಿತ್ (12) ಎಂಬವರೇ ವಿದ್ಯುತ್‌ ತಗುಲಿ ತೀವ್ರ ಸುಟ್ಟ ಗಾಯಗಳಿಗೆ ಒಳಗಾದವರು.

ಬೆಂಗಳೂರಿನ ನಂದಿನಿಲೇಔಟ್ ವಿಜಯಾನಂದ ನಗರದಲ್ಲಿ ಗುರುವಾರ ಸಂಜೆ 6:30ರ ಸುಮಾರಿನಲ್ಲಿ ಈ ಘಟನೆ ಜರುಗಿದೆ. ಚಂದ್ರು ಮತ್ತು ಸುಪ್ರೀತ್‌ಗೆ ಪಾರಿವಾಳಗಳನ್ನು ಹಿಡಿಯುವ ಹವ್ಯಾಸವಿದೆ ಎನ್ನಲಾಗಿದೆ. ಅವರು ಸಂಜೆಯ ಹೊತ್ತಿಗೆ ಪಾರಿವಾಳ ಹಿಡಿಯಲು ಏನೇನೋ ಕಸರತ್ತು ನಡೆಸಿದ್ದು, ಈ ವೇಳೆ ಅವರಿಗೆ ಅರಿವಿಲ್ಲದಂತೆ ವಿದ್ಯುತ್‌ ತಂತಿ ತಗುಲಿದೆ. ಅದರೂ ಹೈಟೆನ್ಶನ್‌ ವಯರ್‌ ಆಗಿದ್ದರಿಂದ ಅವರ ಸ್ಥಿತಿ ಗಂಭೀರವಾಗಿದೆ.

ಮೈಯೆಲ್ಲ ಸುಟ್ಟ ಗಾಯಗಳಾಗಿರುವ ಅವರನ್ನು ಗಂಭೀರಸ್ಥಿತಿಯಲ್ಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಾಗಿದೆ. ಅಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆಗಳನ್ನು ನೀಡಿದ್ದಾರೆ. ಮೇಲ್ನೋಟಕ್ಕೆ ಅವರು ಅಪಾಯದಿಂದ ಪಾರಾದಂತೆ ಕಾಣುತ್ತಾರೆ. ದೇಹ ಭಾಗಗಳು ಸುಟ್ಟು ಹೋಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | Electricution | ತೋಟಕ್ಕೆ ಅಳವಡಿಸಿದ್ದ ಸೋಲಾರ್‌ ಫೆನ್ಸಿಂಗ್‌ ಸ್ಪರ್ಶಿಸಿ ಅಣ್ಣ- ತಮ್ಮ ದಾರುಣ ಮರಣ

Exit mobile version