Site icon Vistara News

Children drowned | ನಿರ್ಮಾಣ ಹಂತದ ಕಟ್ಟಡದ ಸಂಪ್‌ನಲ್ಲಿ ಬಿದ್ದು ಇಬ್ಬರು ಬಾಲಕರ ದುರ್ಮರಣ

sump children death

ಬೆಳಗಾವಿ: ಜಿಲ್ಲೆಯ ಸವದತ್ತಿ ಪಟ್ಟಣದ ಗುರ್ಲಹೊಸೂರಲ್ಲಿ ನಿರ್ಮಾಣ ಹಂತದ ಕಟ್ಟಡದ ಸಂಪ್‌ನಲ್ಲಿ ಬಿದ್ದು (Children drowned) ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಶ್ಲೋಕ ಶಂಭುಲಿಂಗಪ್ಪ ಗುಡಿ (4) ಮತ್ತು ಚಿದಾನಂದ ಪ್ರಕಾಶ ಸಾಲುಂಕೆ (4) ಎಂಬ ಪುಟ್ಟ ಮಕ್ಕಳೇ ಪ್ರಾಣ ಕಳೆದುಕೊಂಡವರು.

ನಿರ್ಮಾಣ ಹಂತದ ಕಟ್ಟಡದಲ್ಲಿ ಒಂದು ತೆರೆದ ಸಂಪ್‌ ಇದ್ದು, ಅದರ ಪಕ್ಕ ಆಟವಾಗುತ್ತಿದ್ದಾಗ ಈ ಇಬ್ಬರು ಆಯತಪ್ಪಿ ಅದಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಮಕ್ಕಳ ಮನೆ ಪಕ್ಕದಲ್ಲೇ ಇದ್ದು ಆಟವಾಡುತ್ತಾ ಅವರು ನಿರ್ಮಾಣ ಹಂತದ ಕಟ್ಟಡದಲ್ಲಿ ಓಡಾಡುತ್ತಿದ್ದರು. ಆಗ ಆಕಸ್ಮಿಕವಾಗಿ ನೀರು ತುಂಬಿರುವ ಸಂಪ್‌ನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಮಕ್ಕಳು ಕಾಣಿಸುತ್ತಿಲ್ಲ ಎಂದು ಹುಡುಕುತ್ತಾ ಬಂದ ಮನೆಯವರಿಗೆ ಇವರು ಎಲ್ಲೂ ಕಾಣಿಸಿಲ್ಲ. ಕೊನೆಗೆ ಸಂಪ್‌ನಲ್ಲಿ ಗಮನಿಸಿದಾಗ ಶವ ಸಿಕ್ಕಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಿಕರ ಗೋಳು ಹೇಳತೀರದಾಗಿದೆ. ಈ ನಡುವೆ ಸಂಪ್‌ನಂಥ ಅಪಾಯಕಾರಿ ನೀರಿನ ಟ್ಯಾಂಕ್‌ಗಳನ್ನು ಮುಚ್ಚದೆ ತೆರೆದಿಟ್ಟಿದ್ದೇ ಪ್ರಾಣ ಹೋಗಲು ಕಾರಣ ಎಂದು ಆಪಾದಿಸಲಾಗಿದೆ.

ಇದನ್ನೂ ಓದಿ | Death of two boys | ರಾಯಚೂರಿನ ಮಾನ್ವಿಯಲ್ಲಿ ಗುಂಡಿಗೆ ಬಿದ್ದು ಇಬ್ಬರು ಬಾಲಕರ ದುರ್ಮರಣ

Exit mobile version