Site icon Vistara News

ಮಳೆ ಬಂತೆಂದು ಮರದ ಆಸರೆ ಪಡೆದಾಗ ಬಡಿದ ಸಿಡಿಲು, ಇಬ್ಬರ ಸಾವು

koppal hospital

ಕೊಪ್ಪಳ: ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಇಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಲಕಮನಗುಳೆ ಸೀಮಾದಲ್ಲಿ ಈ ದುರಂತ ಸಂಭವಿಸಿದೆ.

ಚಿಕ್ಕಮ್ಯಾಗೇರಿ ಗ್ರಾಮದ ದೇವಮ್ಮ( 47), ರೇಷ್ಮಾ (27) ಮೃತರು. ಯಮನವ್ವ ಮುದೇನೂರು, ಅನ್ನಕ್ಕ ಛಲವಾದಿ, ರತ್ನವ್ವ ಸುಣಗಾರ ಗಾಯಗೊಂಡವರು. ಗಾಯಾಳುಗಳನ್ನು ಯಲಬುರ್ಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಲದ ಕೆಲಸಕ್ಕಾಗಿ ಹೋಗಿದ್ದ ಇವರು ಮಳೆ ಬಂದಿದ್ದರಿಂದ ಮಾವಿನ ಮರದ ಕೆಳಗೆ ನಿಂತಿದ್ದರು. ಆಗ ಸಿಡಿಲು ಬಡಿಯಿತು. ಯಲಬುರ್ಗಾ ಆಸ್ಪತ್ರೆಗೆ ತಹಸೀಲ್ದಾರ್‌ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದ್ದಾರೆ.

ಇದನ್ನೂ ಓದಿ | ಬೆಂಗಳೂರು-ಹಾಸನ ಹೈವೇಯಲ್ಲಿ ಟಿಟಿಗೆ ಡಿಕ್ಕಿ ಹೊಡೆದ ಇನೋವಾ, ವಾಹನಗಳು ನಜ್ಜುಗುಜ್ಜು, ಇಬ್ಬರ ಸಾವು

Exit mobile version