Site icon Vistara News

Missing case: ಮಾಲವಿ ಜಲಾಶಯದಲ್ಲಿ ಇಬ್ಬರು ನಾಪತ್ತೆ

two missing

ವಿಜಯನಗರ: ಇಲ್ಲಿ ನಡೆದ ಕ್ರೇನ್ ಪಲ್ಟಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದ್ದು, ಮಾಲವಿ ಜಲಾಶಯ ವೀಕ್ಷಣೆಗೆ ಬಂದ ಇಬ್ಬರು ನಾಪತ್ತೆಯಾಗಿದ್ದಾರೆ.

ಎಂ.ಆರ್. ಹಾಲೇಶ್( 34), ಚರಣ್ ರಾಜ್ (33) ನಾಪತ್ತೆಯಾದವರು. ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿಯ ತಾಲೂಕಿನ ಮಾಲವಿ ಜಲಾಶಯ ವೀಕ್ಷಿಸಲು ಬಂದು ಜಲಾಶಯದಲ್ಲಿ ನಾಪತ್ತೆಯಾದ ಇಬ್ಬರಿಗಾಗಿ ತೀವ್ರ ಹುಡುಕಾಟ ನಡೆದಿದೆ. ನಾಪತ್ತೆಯಾದ ಇಬ್ಬರೂ ಕೊಟ್ಟೂರು ಮೂಲದವರೆಂದು ಹೇಳಲಾಗುತ್ತಿದೆ.

ಕೊಟ್ಟೂರಿನಿಂದ ಐದಾರು ಜನರು ಮಾಲವಿ ಜಲಾಶಯ ವೀಕ್ಷಣೆಗೆ ಆಗಮಿಸಿದ್ದರು. ಅದರಲ್ಲಿ ಇಬ್ಬರು ನಾಪತ್ತೆಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರಿಂದ ಹುಡುಕಾಟ ನಡೆದಿದೆ. ನಾಪತ್ತೆಯಾದವರಿಗೆ ಈಜು ಬರುತ್ತಿರಲಿಲ್ಲ. ಹಗರಿಬೊಮ್ಮನ ಹಳ್ಳಿ ಸಿಪಿಐ ಮಂಜುನಾಥ್ ಸ್ಥಳದಲ್ಲೇ ಮೊಕ್ಕಾಂ ಹೂಡಿ ಶೋಧದಲ್ಲಿ ಭಾಗಿಯಾಗಿದ್ದಾರೆ.

ನಾಪತ್ತೆಯಾದವರನ್ನು ಕೂಡ್ಲಿಗಿ ತಾಲೂಕಿನ ಉಜ್ಜಿನಿ ಗ್ರಾಮದ ಎಂ .ಆರ್ ಹಾಲೇಶ್ ಹಾಗೂ ಕೊಟ್ಟೂರಿನ ಶಿಕ್ಷಕ ಮೈದೂರು ಚರಣ್‌ರಾಜ್‌ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ | Student Missing | ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಗೂಢ ನಾಪತ್ತೆ: 25 ದಿನದ ಬಳಿಕ ಪ್ರಕರಣ ಬೆಳಕಿಗೆ

Exit mobile version