Site icon Vistara News

ಟಗರು ಕಾಳಗ | ಗುದ್ದಿದ ರಭಸಕ್ಕೆ ಅಖಾಡದಲ್ಲೇ ಎರಡು ಟಗರು ಸಾವು

Ram fighting

ವಿಜಯಪುರ: ಜನರನ್ನು ಮೈನವಿರೇಳಿಸುವಂತೆ ಮಾಡುವ ಟಗರು ಕಾಳಗದಲ್ಲಿ, ಅಖಾಡದಲ್ಲೇ ಎರಡು ಟಗರು ಮೃತಪಟ್ಟಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಜಾತ್ರೆಯಲ್ಲಿ ಟಗರು ಕಾಳಗ ಆಯೋಜಿಸಲಾಗಿತ್ತು. ಈ ವೇಳೆ ಎರಡು ಪ್ರತ್ಯೇಕ ಕಾಳಗದಲ್ಲಿ ಬಾಗಲಕೋಟೆ ಜಿಲ್ಲೆಯ ಬೆನ್ನಿಕಟ್ಟಿ ಗ್ರಾಮದ ಟಗರುಗಳು ಗುದ್ದಿವೆ.

ಇದರ ಪರಿಣಾಮವಾಗಿ ಬಾಗೇವಾಡಿ ತಾಲೂಕಿನ ಮನಗೂಳಿ ಹಾಗೂ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಟಗರುಗಳು ಮೃತಪಟ್ಟಿವೆ.

ಎರಡು ದಿನದ ಹಿಂದೆ ನಡೆದ ಘಟನೆಯ ವಿಡಿಯೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಒಂದೇ ಗುದ್ದಿಗೆ ಟಗರುಗಳು ನೆಲಕ್ಕುರುಳಿ ಬೀಳುವ ದೃಶ್ಯ ಮನಕಲಕುವಂತಿದೆ.

ಇದನ್ನೂ ಓದಿ | Road Accident | ಸ್ಕೂಟರ್‌ಗೆ ಲಾರಿ ಡಿಕ್ಕಿ; ರಸ್ತೆ ಅಪಘಾತದಲ್ಲಿ ನವವಿವಾಹಿತೆ ಸಾವು

Exit mobile version