Site icon Vistara News

Teens drowned | ಕಾರಂಜಾ ಜಲಾಶಯ ಕಾಲುವೆಗೆ ಈಜಲು ಹೋದ ಇಬ್ಬರು ತರುಣರು ನೀರುಪಾಲು

two teens drowned

ಬೀದರ್​​: ಇಲ್ಲಿನ ಕಾರಂಜಾ ಜಲಾಶಯದ ಕಾಲುವೆಯಲ್ಲಿ ಈಜಲು ಹೋದ ಇಬ್ಬರು ತರುಣರು (Teens drowned) ನೀರು ಪಾಲಾಗಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮ ಬಳಿ ಇರುವ ಕಾರಂಜಾ ಡ್ಯಾಂ ಬಳಿ ಘಟನೆ ನಡೆದಿದ್ದು, ಬಸವರಾಜ್ ಭೂದೆ (16) ಸಾಯಿನಾಥ್ (16) ಮೃತಪಟ್ಟ ತರುಣರು. ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಮೃತದೇಹಗಳನ್ನು ಮೇಲೆತ್ತಿದ್ದಾರೆ. ದನ್ನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ಎಸ್ಸೆಸ್ಸೆಲ್ಸಿಯಲ್ಲಿ ಕಲಿಯುತ್ತಿರುವ ಈ ಮಕ್ಕಳು ಭಾನುವಾರ ರಜಾ ದಿನವಾಗಿದ್ದರಿಂದ ಕಾಲುವೆ ಕಡೆಗೆ ಈಜಲು ಹೋಗಿದ್ದರು. ಆದರೆ, ಅಲ್ಲಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡರು.

ಇದನ್ನೂ ಓದಿ | Road accident | ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಆಟೋ- ಕ್ಯಾಂಟರ್‌ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತ್ಯು

Exit mobile version