Site icon Vistara News

ಗಣೇಶಮೂರ್ತಿ ಮೆರವಣಿಗೆ ವೇಳೆ ಮಚ್ಚು ಪ್ರದರ್ಶಿಸಿ ಬೆದರಿಸಿದ ಇಬ್ಬರು ಯುವಕರ ಬಂಧನ

ದಾವಣಗೆರೆ: ಹರಿಹರ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಜೈ ಭೀಮ್‌ ನಗರದಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ವೇಳೆ ಮಚ್ಚು ಪ್ರದರ್ಶನ ಮಾಡಿ ಭಯದ ವಾತಾವರಣ ಸೃಷ್ಟಿಸಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ನಯಾಜ್ ಅಹಮದ್ ( 21 ) , ಮಹಮದ ನವಾಜ್ ( 19 ) ಬಂಧಿತ ಯುವಕರು. ಮತ್ತೊಬ್ಬ ಆರೋಪಿ ಶೇರ್‌ ಆಲಿ ಕೂಡಾ ಮಚ್ಚು ತೋರಿಸಿ ಬೆದರಿಸಿದ್ದ. ಆತ ಈಗ ನಾಪತ್ತೆಯಾಗಿದ್ದು ಆತನ ಹುಡುಕಾಟದಲ್ಲಿದ್ದಾರೆ ಪೊಲೀಸರು.

ಎರಡು ದಿನಗಳ ಹಿಂದೆ ಜೈಭೀಮ್ ನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಯ ವಿಸರ್ಜನಾ ಮೆರವಣಿಗೆ ಸರ್ಕಲ್‌ಗೆ ಬಂದಾಗ ಈ ಮೂವರು ದುಷ್ಕರ್ಮಿಗಳು ಮಚ್ಚು ಪ್ರದರ್ಶನ ಮಾಡಿದ್ದರು, ಬೆದರಿಕೆ ಕೂಡಾ ಹಾಕಿದ್ದರು. ಈ ಬಗ್ಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜಗದೀಶ್ ಎಂಬವರು ಹರಿಹರ ನಗರ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದಾಗ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version