Site icon Vistara News

Road accident : ಯಲಹಂಕ ಬಳಿ ಬೈಕ್‌ ಡಿವೈಡರ್‌ಗೆ ಬಡಿದು ಇಬ್ಬರು ಮೃತ್ಯು; ಏರ್‌ಪೋರ್ಟ್‌ಗೆ ಹೋಗುತ್ತಿದ್ದಾಗ ಅಪಘಾತ

Bike accident

#image_title

ಬೆಂಗಳೂರು: ದೇವನಹಳ್ಳಿಯಿಂದ ನಗರಕ್ಕೆ ಬರುವ ದಾರಿಯಲ್ಲಿ ಯಲಹಂಕ ಕಾಫಿ ಡೇ ಬಳಿ ಬೈಕೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು (Road accident) ಪಲ್ಟಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟರು. ಗುದ್ರಾಮ್‌, ಜುಗ್ ರಾಜ್ ಪ್ರಹಾಪತ್ ಮೃತರು. ಇವರಲ್ಲಿ ಒಬ್ಬರು ರಾಜಸ್ಥಾನಕ್ಕೆ ಹೋಗಲು ವಿಮಾನ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು. ಇನ್ನೊಬ್ಬರು ಅವರನ್ನು ವಿಮಾನ ನಿಲ್ದಾಣಕ್ಕೆ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು.

ನಗರದ ಹೂಡಿ ಬಳಿ ಫರ್ನಿಚರ್ ಹಾಗು ಇತರೆ ವಸ್ತುಗಳ ಶಾಪ್ ಮಾಲೀಕ ರಾಜಸ್ಥಾನಕ್ಕೆ ಹೊರಟಿದ್ದ ಸಂಬಂಧಿಕರೊಬ್ಬರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಎನ್‌ಫೀಲ್ಡ್‌ ಬುಲೆಟ್‌ ಬೈಕ್‌ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಅತಿಯಾದ ವೇಗದಿಂದಾಗಿ ದ್ವಿಚಕ್ರ ವಾಹನ ಕಂಟ್ರೋಲ್‌ ಸಿಗದೆ ಅಪಘಾತ ಪಲ್ಟಿಯಾದ ಕೂಡಲೇ ಒಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ ಇನ್ನೊಬ್ಬರನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹಾಸನದಲ್ಲಿ ಬೈಕ್‌ ಮೇಲೆಯೇ ಹರಿದ ಬಸ್‌: ಸವಾರ ಸ್ಥಳದಲ್ಲೇ ಮೃತ್ಯು

ಹಾಸನ: ನಗರದ ಹೊರವಲಯದ ಹೊಸಕೊಪ್ಪಲು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟು, ಯುವತಿಯೊಬ್ಬಳು ಗಾಯಗೊಂಡಿದ್ದಾಳೆ. ಬಸ್‌ ಬೈಕ್‌ನ ಮೇಲೆಯೇ ಹರಿದು ದುರಂತ ಸಂಭವಿಸಿದೆ. ಇದರ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಾಸನದ ಖಾಸಗಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಧನು (24) ಮೃತ ಯುವಕ. ಧನು ಹೊಳೆನರಸೀಪುರದ ದೇವರಗುಡ್ಡೇನಹಳ್ಳಿ ಗ್ರಾಮದವನು.

ಗಾರ್ಮೆಂಟ್ಸ್‌ನ ಉದ್ಯೋಗಿ ಧನು ಪಿಯುಸಿ ವಿದ್ಯಾರ್ಥಿನಿ ವಿದ್ಯಾ ಎಂಬಾಕೆಯನ್ನು ಕರೆದುಕೊಂಡು ಬೈಕ್‌ನಲ್ಲಿ ಹೋಗುತ್ತಿದ್ದ. ವಿದ್ಯಾ ಪಿಯು ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಳು. ಅವರಿಬ್ಬರು ಸಾಗುತ್ತಿದ್ದ ಬೈಕ್‌ಗೆ ಸಾರಿಗೆ ಬಸ್‌ ಡಿಕ್ಕಿ ಹೊಡೆದಿದೆ. ಮಾತ್ರವಲ್ಲ ರಸ್ತೆಗೆ ಉರುಳಿಬಿದ್ದ ಧನುವಿನ ಮೇಲೆಯೇ ಚಕ್ರ ಹರಿದಿದೆ.

ಹಿಂಬದಿ ಕುಳಿತಿದ್ದ ವಿದ್ಯಾಗೆ ಗಾಯವಾಗಿದ್ದು, ಆಕೆಗೆ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Road Accident: ನೆಲಮಂಗಲದ ಬಳಿ ಲಾರಿ ಹರಿದು ಯುವತಿ ಸ್ಥಳದಲ್ಲೇ ಸಾವು

Exit mobile version