Site icon Vistara News

Car Accident: ಕಾರು ರ‍್ಯಾಷ್‌ ಡ್ರೈವಿಂಗ್‌ಗೆ ಇಬ್ಬರು ಯುವಕರು ಬಲಿ; ಬಸ್‌ಗೆ ಡಿಕ್ಕಿ ಹೊಡೆದು ಕಾರು ಸಂಪೂರ್ಣ ಜಖಂ

#image_title

ಬೆಂಗಳೂರು: ಕಾರು ರ‍್ಯಾಷ್‌ ಡ್ರೈವಿಂಗ್‌ಗೆ ಇಬ್ಬರು ಯುವಕರು ಬಲಿಯಾಗಿರುವ ಘಟನೆ ನಗರದ ಮಡಿವಾಳ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಸ್‌ಗೆ ಡಿಕ್ಕಿಯಾಗಿದ್ದರಿಂದ ಕಾರು ಸಂಪೂರ್ಣ ಜಖಂ ಆಗಿದ್ದು, ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆ ಅಪಘಾತಕ್ಕೆ (Car Accident) ಕಾರಣ ಎನ್ನಲಾಗಿದೆ.

ಭಗೀರಥ ಮತ್ತು ಕಾರ್ತಿಕ್‌ ರೆಡ್ಡಿ

ಆಂಧ್ರಪ್ರದೇಶ ಮೂಲದ ಕಾರ್ತಿಕ್ ರೆಡ್ಡಿ (23), ಭಗಿರಥ ರೆಡ್ಡಿ (17) ಮೃತ ಯುವಕರು. ಮಂಗಳವಾರ ಬೆಳಗ್ಗೆ ಸಿಲ್ಕ್ ಬೊರ್ಡ್ ಆಫ್ ರ‍್ಯಾಂಪ್ ಬಳಿ ಘಟನೆ‌ ನಡೆದಿದೆ. ರೂಪೇನ ಅಗ್ರಹಾರ ಕಡೆಯಿಂದ ಮಡಿವಾಳದ ಕಡೆಗೆ ಬರುತಿದ್ದ ಕಾರು, ವೇಗವಾಗಿ ಬಂದು ತಮಿಳುನಾಡು ಬಸ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯುವಕರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮಡಿವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Vartur Prakash : ಮಾಜಿ ಶಾಸಕ ವರ್ತೂರು ಪ್ರಕಾಶ್‌ ಪುತ್ರನ ವಿರುದ್ಧ ಜಾಮೀನುರಹಿತ ವಾರಂಟ್‌ ಜಾರಿ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ನೆಲಮಂಗಲ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ನಡೆದಿದೆ. ಭದ್ರಯ್ಯ (42) ಮೃತ ವ್ಯಕ್ತಿ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version