Site icon Vistara News

ಹೂಡೆ ಬೀಚ್‌ ಬಳಿ ಸಮುದ್ರದಲ್ಲಿ ಮುಳುಗಿ ಇಬ್ಬರ ಸಾವು, ಒಬ್ಬ ನಾಪತ್ತೆ

ಹೂಡೆ ಬೀಚ್‌

ಉಡುಪಿ: ಜಿಲ್ಲೆಯ ಹೂಡೆ ಬೀಚ್‌ನ ಬಳಿ ಸಮುದ್ರದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ಒಬ್ಬ ನಾಪತ್ತೆಯಾಗಿದ್ದಾನೆ. ಮಣಿಪಾಲ ಎಂಐಟಿ ಎಂಜಿನಿಯರಿಂಗ್ ಕಾಲೇಜಿನ ನಿಶಾಂತ್, ಷಣ್ಮುಖ್‌ ಮೃತರು. ಶ್ರೀಕರ್‌ ನಾಪತ್ತೆಯಾದವ. ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಹೂಡೆ ಬೀಚ್‌ನಲ್ಲಿ ಮೂವರು ವಿದ್ಯಾರ್ಥಿಗಳು ಭಾನುವಾರ ಈಜಲು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಭಾರಿ ಅಲೆಗಳ ತೀವ್ರತೆಗೆ ವಿದ್ಯಾರ್ಥಿಗಳು ಮುಳುಗಿದ್ದಾರೆ.

ಮುಳುಗಿದ್ದ ನಿಶಾಂತ್, ಷಣ್ಮುಖ್‌ನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾಗ ಮೃತಪಟ್ಟಿದ್ದಾರೆ. ಆದರೆ ನಾಪತ್ತೆಯಾದ ಶ್ರೀಕರ್‌ ಸಿಕ್ಕಿಲ್ಲ. ಆತನಿಗಾಗಿ ಮುಳುಗು ತಜ್ಞರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ | Tragedy | ನೀರು ಕುಡಿಯಲು ಹೋಗಿ ಜಾರಿ ಬಿದ್ದ ಅಣ್ಣ, ರಕ್ಷಿಸಲು ಹೋದ ತಮ್ಮ ಇಬ್ಬರೂ ಕಾಲುವೆ ಪಾಲು

Exit mobile version