Site icon Vistara News

ಕುಡಿದ ಮತ್ತಿನಲ್ಲಿ ಯುವತಿಯ ಬೀದಿ ರಂಪಾಟ; ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ

ಬೀದಿ ರಂಪಾಟ

ಉಡುಪಿ: ಕುಡಿದ ಮತ್ತಿನಲ್ಲಿ ಸಾರ್ವಜನಿಕರೊಂದಿಗೆ ಯುವತಿ ಕಿರಿಕ್ ಮಾಡಿಕೊಂಡಿರುವುದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮದ್ಯ ಸೇವನೆ ಮಾಡಿದ್ದ ಯುವಕ ಮತ್ತು ಯುವತಿ ಪಿಜ್ಜಾ ಶಾಪ್‌ಗೆ ಬಂದು ಗಲಾಟೆ ಮಾಡಿದ್ದು, ಈ ವೇಳೆ ಸಮಾಧಾನ ಮಾಡಲು ಮುಂದಾದ ಸಾರ್ವಜನಿಕರ ಮೇಲೆ ಯುವತಿ ಹಲ್ಲೆ ಮಾಡಿದ್ದಾಳೆ.

ಹೊರ ರಾಜ್ಯ ಮೂಲದ ಯುವತಿಯ ಬೀದಿ ರಂಪಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕ ಮತ್ತು ಯುವತಿ ಕುಡಿದು ಬಂದು ಪಿಜ್ಜಾ ಶಾಪ್‌ನಲ್ಲಿ ಗಲಾಟೆ ಮಾಡಿದ್ದಾರೆ. ಹೀಗಾಗಿ ಇಬ್ಬರನ್ನು ಸಿಬ್ಬಂದಿ ಹೊರಗೆ ಕಳುಹಿಸಿದ್ದಾರೆ. ಶಾಪ್‌ನಿಂದ ಹೊರಬಂದ ಯುವತಿ ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಈ ವೇಳೆ ಸಮಾಧಾನ ಮಾಡಲು ಸಾರ್ವಜನಿಕರು ಮುಂದಾಗಿದ್ದರಿಂದ ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾಳೆ.

ಗಲಾಟೆ ಮಾಡುತ್ತಿದ್ದ ಯುವತಿಯ ಕುಡಿದ ನಶೆ ಇಳಿಸಲು ಸಾರ್ವಜನಿಕರು ಮುಖಕ್ಕೆ ತಣ್ಣೀರು ಎರಚಿದ್ದಾರೆ. ಬಳಿಕ ಕುಡಿದ ಮತ್ತಿನಲ್ಲಿ ನಿಲ್ಲಲಾಗದೇ ಪದೇ ಪದೇ ರಸ್ತೆಯಲ್ಲಿ ಬೀಳುತ್ತಿದ್ದ ಯುವತಿ, ಸಾರ್ವಜನಿಕರೊಂದಿಗೆ ವಾಗ್ವಾದ ನಡೆಸುತ್ತಿದ್ದಾಗ ತಡೆಯಲು ಯತ್ನಿಸಿದ ಜತೆಗಿದ್ದ ಯುವಕನಿಗೂ ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಕೊನೆಗೆ ಯುವತಿಯನ್ನು ಮಣಿಪಾಲ ಪೊಲೀಸರು ವಿಚಾರಣೆ ನಡೆಸಲು ಕರೆದುಕೊಂಡು ಹೋದರು.

ಇದನ್ನೂ ಓದಿ | ಪ್ರವೀಣ್ ನೆಟ್ಟಾರು ಹತ್ಯೆ‌ | ಗ್ರಾಪಂ ಸದಸ್ಯ ಸೇರಿ ಮೂವರ ಬಂಧನ; ಎನ್‌ಐಎ ತಂಡದ ಕಾರ್ಯಾಚರಣೆ

Exit mobile version