Site icon Vistara News

CC TV footage: ಸಂಗಡಿಗನ ಶವವನ್ನು ಕಸದಂತೆ ದಾರಿಬದಿ ಎಸೆದ ಹಣ್ಣಿನ ವ್ಯಾಪಾರಿಗಳು!

dead body

ಉಡುಪಿ: ಉಡುಪಿಯಲ್ಲಿ ನಡೆದ ಅಮಾನವೀಯ ಕೃತ್ಯವೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಣ್ಣು ವ್ಯಾಪಾರಿಗಳು ತಮ್ಮ ಸಂಗಡಿಗನ ಮೃತದೇಹವನ್ನು ಮಾರ್ಗಮಧ್ಯೆಯೇ ಟೆಂಪೋದಿಂದ ಕಸದಂತೆ ಎಸೆದು ಬಿಸಾಕಿ ಹೋಗಿದ್ದಾರೆ.

ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಮ್ಮಣ್ಣು ಗ್ರಾಮದಲ್ಲಿ ಘಟನೆ ನಡೆದಿದೆ. ಹೊರ ಜಿಲ್ಲೆಯಿಂದ ಬಂದು ಉಡುಪಿಯಲ್ಲಿ ಕಲ್ಲಂಗಡಿ ಮಾರುತ್ತಿದ್ದ ಈ ವ್ಯಾಪಾರಿಗಳು ಸಂಗಡಿಗರೊಂದಿಗೆ ಟೆಂಪೋದಲ್ಲಿ ತೆರಳುತ್ತಿದ್ದವರು. ಮಾರ್ಗ ಮಧ್ಯೆಯೇ ಇವರಲ್ಲೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಮೃತಪಟ್ಟ ಸಂಗಡಿಗನ ಶವವನ್ನು ಟೆಂಪೋದಿಂದ ಕಸದಂತೆ ಎಳೆದು ಮಾರ್ಗದ ಬದಿಯಲ್ಲಿ ಹಾಕಿ ಏನೂ ಆಗಿಲ್ಲದಂತೆ ತೆರಳಿದ್ದಾರೆ.

ವ್ಯಾಪಾರಿಗಳ ಈ ಅಮಾನವೀಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಮೃತದೇಹವನ್ನು ಸಾಮಾಜಿಕ‌ ಕಾರ್ಯಕರ್ತ ಈಶ್ವರ ಮಲ್ಪೆ ಎಂಬವರು ಶವಾಗಾರದಲ್ಲಿರಿಸಿದ್ದಾರೆ. ಮಲ್ಪೆ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ. ಕೃತ್ಯದಲ್ಲಿ ಕೊಲೆ ಆಯಾಮವೂ ತನಿಖೆಯಾಗುತ್ತಿದೆ.

ಇದನ್ನೂ ಓದಿ: MLA Satish Reddy: ಶಾಸಕರ ಕೊಲೆ ಸುಪಾರಿ ಪ್ರಕರಣ: ಆರೋಪಿಗಿದೆ ಭೀಕರ ಹಿನ್ನೆಲೆ!

Exit mobile version