Site icon Vistara News

ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಸ್ಕಾರ್ಟ್ ವಾಹನ ಅಪಘಾತ: ಕಾರಿನಲ್ಲಿದ್ದವರು ಸೇಫ್‌

ಕಾರು ಅಪಘಾತ

ಉಡುಪಿ: ಇಲ್ಲಿಯ ಸಂತೆಕಟ್ಟೆ ಕೆ.ಜಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಎಸ್ಕಾರ್ಟ್ ವಾಹನ ಅಪಘಾತಕ್ಕೀಡಾಗಿದೆ. ಬೆಂಗಾವಲು ವಾಹನದ ಮುಂದೆ ಸಂಚರಿಸುತ್ತಿದ್ದ ಲಾರಿಯ ಚಾಲಕನು ಸೂಚನೆ ನೀಡದೇ ಪಥ ಬದಲಿಸಿದ ಕಾರಣ, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಕಾರು ಪಲ್ಟಿಯಾಗಿದೆ.

ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳು ಸಿಬ್ಬಂದಿಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರೇ ದಾಖಲು ಮಾಡಿದ್ದಾರೆ. ಬೆಂಗಾವಲು‌ ಸಿಬ್ಬಂದಿ ಗಣೇಶ್ ಆಳ್ವರಿಗೆ ಸಣ್ಣ ಗಾಯವಾಗಿದ್ದು, ಸಂಭವಿಸಬಹುದಾದ ದೊಡ್ಡ ಗಂಡಾಂತರ ಸಣ್ಣದರಲ್ಲೇ ಮುಗಿದಿದೆ.

ಇದನ್ನೂ ಓದಿ | ಭೀಕರ ಅಪಘಾತ ಯೋಧನ ಪತ್ನಿ, ಮಗು ಸ್ಥಳದಲ್ಲೇ ಸಾವು

Exit mobile version