Site icon Vistara News

Suicide Case : ನಿರ್ಮಾಣ ಹಂತದ ಸ್ವಂತ ಮನೆಯಲ್ಲೇ ಮಾಲೀಕ ಆತ್ಮಹತ್ಯೆ, ದೃಷ್ಟಿ ಬೊಂಬೆ ಕಟ್ಟದ್ದೇ ಕಾರಣ ಎಂದರು ಜನ!

suicide case

ನೆಲಮಂಗಲ/ವಿಜಯಪುರ: ಇಲ್ಲಿನ ವಡೇರಹಳ್ಳಿಯಲ್ಲಿ ಮಾಲೀಕನೊಬ್ಬ ನಿರ್ಮಾಣ ಹಂತದಲ್ಲಿರುವ ತನ್ನ ಸ್ವಂತ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಧರ್ (49) ಮೃತ ದುರ್ದೈವಿ.

ಮೃತ ಶ್ರೀಧರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಅವರು ಮನೆಯೊಂದನ್ನು ಕಟ್ಟುತ್ತಿದ್ದು, ನಿರ್ಮಾಣ ಹಂತದ ಮನೆಯ ಸೀಲಿನಲ್ಲಿದ್ದ ಹುಕ್ಕಿಗೆ ನೇಣು ಬಿಗಿದುಕೊಂಡಿದ್ದಾರೆ. ಕಟ್ಟಡ ಕೊನೆಯ ಹಂತದಲ್ಲಿದ್ದರೂ ಯಾವುದೇ ದೃಷ್ಟಿ ಬೊಂಬೆ ಕಟ್ಟಿಲ್ಲ. ಕಾಣದ ಶಕ್ತಿ ಪ್ರಭಾವ ಮನೆಯ ಮೇಲೆ ಬಿದ್ದಿತ್ತು ಎಂದು ಮನೆಯವರು ಶಂಕಿಸಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆ ಆಗಿದೆ. ವಿಜಯಪುರದ ಸಿಂದಗಿ ನಗರದ ಬಂದಾಳ ರಸ್ತೆಯ ಸ್ವಾಮಿ ವಿವೇಕಾನಂದ ವೃತ್ತಕ್ಕೆ ಹೋಗುವ ಮಾರ್ಗದಲ್ಲಿರುವ ಶ್ರೀ ದಾನೇಶ್ವರಿ ಸ್ಟೀಲ್ ಪರ್ನಿಚರ್ ಅಂಗಡಿಯ ಮಾಲೀಕ ಸಂಗಮೇಶ ಚನ್ನಪ್ಪ ಇವಣಿ (35)ರ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: Bmtc Driver: ಡಿಪೋ ಮ್ಯಾನೇಜರ್‌ ಕಿರುಕುಳಕ್ಕೆ ಬೇಸತ್ತ ಬಿಎಂಟಿಸಿ ಚಾಲಕ; ವಿಷ ಕುಡಿದು ಆತ್ಮಹತ್ಯೆಗೆ ಯತ್ನ

ಮೃತ ಸಂಗಮೇಶ್‌ಗೆ 3 ವರ್ಷದ ಗಂಡು ಮಗು ಮತ್ತು ಐದು ತಿಂಗಳ ಹೆಣ್ಣು ಮಗುವಿದೆ. ಸಂಗಮೇಶ್‌ ಸಾವಿನ ಸುದ್ದಿ ಕೇಳಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version