Site icon Vistara News

ಡಕಾಯಿತಿ ಪ್ರಕರಣದ ವಿಚಾರಣಾಧೀನ ಕೈದಿ ಪರಾರಿ; ಬಂಧನಕ್ಕೆ ಬಲೆ ಬೀಸಿದ ಪೊಲೀಸರು

Gangster Prakash Siddhi, who escaped from Sirsi sub-jail, arrested

#image_title

ಶಿರಸಿ: ಡಕಾಯಿತಿ ಪ್ರಕರಣದ ವಿಚಾರಣಾಧೀನ ಕೈದಿ ಪರಾರಿಯಾದ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಸಬ್ ಜೈಲಿನಲ್ಲಿ ಶನಿವಾರ ಬೆಳಗ್ಗೆ (ಫೆ.೪) ನಡೆದಿದೆ.

ಶಿರಸಿ ಸಬ್ ಜೈಲಿನಿಂದ ಪ್ರಕಾಶ್ ಕೃಷ್ಣ ಸಿದ್ದಿ (೨೪) ಪರಾರಿಯಾದ ಕೈದಿಯಾಗಿದ್ದು, ಮೂಲತಃ ಯಲ್ಲಾಪುರ ತಾಲೂಕಿನ ಜಡಹಲಗಿನ ಕೊಪ್ಪ ಗ್ರಾಮದ ನಿವಾಸಿಯಾಗಿದ್ದ. ದರೋಡೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಶಿರಸಿ ಸಬ್ ಜೈಲು ಸೇರಿದ್ದ ಈಗ ಶನಿವಾರ ಬೆಳಗ್ಗೆ ೮.೪೫ರ ಸುಮಾರಿಗೆ ಪರಾರಿಯಾಗಿದ್ದಾನೆ.

ಇದನ್ನೂ ಓದಿ: MS Dhoni: ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಎಂ.ಎಸ್​. ಧೋನಿ; ಫೋಟೊ ವೈರಲ್​

ಪ್ರಕಾಶ್ ಕೃಷ್ಣ ಸಿದ್ದಿಯು ಬಿಳಕಿ ಗ್ರಾಮದಲ್ಲಿ ನಡೆದ ಡಕಾಯತಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಯಲ್ಲಾಪುರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಪರಾರಿಯಾಗಿರುವ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Exit mobile version