Site icon Vistara News

Karwar news | ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನದಿಗೆ ಕಾಲು ಜಾರಿ ಬಿದ್ದು ಸಾವು

karwar kali river sohel fishing

ಕಾರವಾರ: ಕಾಳಿ ನದಿಯಲ್ಲಿ (Karwar) ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾನೆ. ನಗರದ ಅಳ್ವೇವಾಡ ಬಳಿ ಈ ಘಟನೆ ನಡೆದಿದೆ.

ನಗರದ ಕಾಜುಭಾಗ ಪಿಂಗ್ಳೆ ರೋಡ್ ನಿವಾಸಿ ಸೋಹೆಲ್(40) ಮೃತ ವ್ಯಕ್ತಿ. ಭಾನುವಾರ ರಾತ್ರಿ (ಡಿ.೪) ವೇಳೆ ಕಾಳಿ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಈತ ನಾಪತ್ತೆಯಾಗಿದ್ದ. ಪೊಲೀಸರಿಗೆ ಈ ಸಂಬಂಧ ದೂರು ನೀಡಲಾಗಿತ್ತು.

ನದಿಗೆ ಕಾಲು ಜಾರಿ ಬಿದ್ದಿರಬಹುದು ಎನ್ನುವ ಸಂಶಯದಲ್ಲಿ ಹುಡುಕಾಟ ನಡೆಸಲಾಗಿತ್ತು. ಸೋಮವಾರ ಸಂಜೆ (ಡಿ.೫) ಅಳ್ವೇವಾಡದ ನದಿಯ ದಂಡೆಯ ಮೇಲೆ ಸೋಹೆಲ್ ಶವ ಪತ್ತೆಯಾಗಿದೆ. ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Anjanadri hill | ಅಂಜನಾದ್ರಿ ಬೆಟ್ಟದ‌ ಸೆಕ್ಸ್‌, ಡ್ರಗ್‌ ಮಾಫಿಯಾ ತಡೆಯದಿದ್ದರೆ ಹೋರಾಟ: ಮುತಾಲಿಕ್‌ ಎಚ್ಚರಿಕೆ

Exit mobile version