Site icon Vistara News

Sirsi News | ಒಂದೇ ಗ್ಯಾಂಗ್‌ನಿಂದ ಆರು ಕಡೆ ದರೋಡೆ

Robbery at Sirsi Banavasi Police Station

ಶಿರಸಿ: ಒಂದೇ ತಂಡದ ದರೋಡೆಕೋರರು ಆರು ಕಡೆ ದರೋಡೆ (Robbery at Sirsi) ಮಾಡಿದ ಘಟನೆ‌ ಶಿರಸಿ ತಾಲೂಕಿನಲ್ಲಿ‌ ನಡೆದಿದೆ.

ಮಂಗಳವಾರ ರಾತ್ರಿ (ಡಿ.೨೭) ವೇಳೆಯಲ್ಲಿ ಬೈಕ್ ಸವಾರರನ್ನೇ ಟಾರ್ಗೆಟ್ ಮಾಡಿದ್ದ ಗ್ಯಾಂಗ್ ಆರು ಕಡೆ ದರೋಡೆ ಮಾಡಿ ಪರಾರಿಯಾಗಿದೆ. ಶಿರಸಿ ತಾಲೂಕಿನ ಗ್ರಾಮೀಣ ಭಾಗದಲ್ಲಿ‌ ಹೊಂಚು ಹಾಕಿ ಒಬ್ಬರೇ ಇರುವ ಸವಾರರನ್ನು ಟಾರ್ಗೆಟ್ ಮಾಡಿದ್ದ ದರೋಡೆಕೋರರು ಅವರಲ್ಲಿದ್ದ ಚಿನ್ನ, ಹಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಬೈಕಿನ ಮೇಲೆ ಬಂದ ಇಬ್ಬರು ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ | Ramanagara | ಅಶ್ವತ್ಥನಾರಾಯಣ ಮಂದಿರವನ್ನು ಕಟ್ಟಲಿ ಎಂದ ಡಿಕೆಶಿ; ಅವರಿಗೂ ರಾಮನಗರಕ್ಕೂ ಸಂಬಂಧ ಏನು ಎಂದ ಎಚ್‌ಡಿಡಿ

ತಾಲೂಕಿನ ಹೆಗಡೆಕಟ್ಟಾ ಕ್ರಾಸ್‌ನಲ್ಲಿ ಗಿರೀಶ ಮಹಾಬಲೇಶ್ವರ ನಾಯ್ಕ, ಕುಮಟಾ ರಸ್ತೆಯಲ್ಲಿ ಉಮೇಶ ಗೌಡ, ಗಡಿಹಳ್ಳಿ ಕ್ರಾಸ್ ನಲ್ಲಿ ರತ್ನಾಕರ ನಾಯ್ಕ, ಉಂಚಳ್ಳಿ ರಸ್ತೆಯಲ್ಲಿ ಕರಿಯಪ್ಪ ನಾಯ್ಕ, ಬಿದರಳ್ಳಿಯಲ್ಲಿ ಶ್ರೀಕಾಂತ ಗಣೇಶ ಕಬ್ಬೇರ, ಮಧುರವಳ್ಳಿಯಲ್ಲಿ ಶಿವಕುಮಾರ ಗೌಡ ಅವರನ್ನು ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ.

ವಿಷಯ ತಿಳಿದ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ‌ ತನಿಖೆ ಮುಂದುವರಿಸಿದ್ದಾರೆ. ಡಿ.ಎಸ್.ಪಿ. ಕೆ.ಎಲ್. ಗಣೇಶ ಅವರ ಮಾರ್ಗದರ್ಶನದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ ಅವರ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದ್ದು, ಕಳ್ಳರಿಗೆ ಬಲೆ ಬೀಸಿದ್ದಾರೆ. ಶಿವಮೊಗ್ಗ ಹಾಗೂ ಹಾವೇರಿಯಲ್ಲಿ ಶಿರಸಿ ಪೊಲೀಸರಿಂದ ತೀವ್ರ ತನಿಖೆ ಮುಂದುವರಿದಿದೆ.‌ ಈ ಬಗ್ಗೆ ಶಿರಸಿ ಹಾಗೂ ಬನವಾಸಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Karnataka Election | ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭ; ಜನಾರ್ದನ ರೆಡ್ಡಿ ಪಾಳಯಕ್ಕೆ ಜಿಗಿತ

Exit mobile version