Site icon Vistara News

Karnataka Election 2023: ಲಿಂಗಾಯತರನ್ನು ಸಿಎಂ ಮಾಡುತ್ತೇವೆಂದು ಕಾಂಗ್ರೆಸ್‌ ಘೋಷಿಸಲಿ: ವಿ. ಸೋಮಣ್ಣ ಸವಾಲು

Housing is not a ministerial berth says V Somanna Karnataka Election 2023 updates

ಚಾಮರಾಜನಗರ: ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅಂತೀರಲ್ಲವೇ? ಹಾಗಾದರೆ ಕಾಂಗ್ರೆಸ್‌ನವರು ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಲಿ ನೋಡೋಣ. ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಣೆ ಮಾಡಲಿ ಎಂದು ಸಚಿವ, ಚಾಮರಾಜನಗರ ಹಾಗೂ ವರುಣ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ಚಾಮರಾಜನಗರದಲ್ಲಿ ವಿ.ಸೋಮಣ್ಣ ಸವಾಲು ಹಾಕಿದರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತರು ಸ್ವಾಭಿಮಾನಿಗಳು, ದಡ್ಡರಲ್ಲ. ವೋಟ್ ಬ್ಯಾಂಕ್ ಮಾಡಿಕೊಂಡ ವರ್ಗಗಳಿಗೆ 75 ವರ್ಷಗಳಾದರೂ ಕಾಂಗ್ರೆಸ್‌ ಏನೂ ಮಾಡಿಲ್ಲ. ಜನ ಬದಲಾವಣೆ ಬಯಸಿದ್ದಾರೆ. ಲಿಂಗಾಯತರು ಬುದ್ಧಿವಂತರು ಮತ್ತು ಪ್ರಜ್ಞಾವಂತರು. ಲಿಂಗಾಯತರನ್ನು ಬ್ಲ್ಯಾಕ್‌ಮೇಲ್ ಮಾಡಲು ಹೊರಟರೆ ನಿಮಗೇ ನಿರಾಸೆಯಾಗುತ್ತದೆ‌. ಯೂಸ್ ಆ್ಯಂಡ್ ಥ್ರೋ ಮಾಡುವ ತಂತ್ರಗಾರಿಕೆ ಬೇಡ. ವೀರೇಂದ್ರ ಪಾಟೀಲ್ ಅವರನ್ನು ತೆಗೆದವರು ಯಾರು? ರಾಜಶೇಖರ ಮೂರ್ತಿ ಅವರನ್ನು ಓಡಿಸಿದವರು ಯಾರು? ನಿಜಲಿಂಗಪ್ಪ ಅವರನ್ನು‌ ದೇಶ ಬಿಟ್ಟು ಕಳಿಸಿದವರು ಯಾರು? ಎಂದು ಕಾಂಗ್ರೆಸ್ ವಿರುದ್ಧ ವಿ. ಸೋಮಣ್ಣ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Karnataka Election 2023 : ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ ಸಂಸದ ಡಿ.ಕೆ. ಸುರೇಶ್‌; ಕಾರಣವೇನು ಗೊತ್ತೇ?

ಕಾಂಗ್ರೆಸ್‌ನವರು ಕೇವಲ ತೌಡು ಕುಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬೇರೆ ಏನೂ ಹೇಳಲು ಆಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಷಾ, ಸೋಮಣ್ಣ ಮೇಲೆ ಏನು ಹೇಳಲು ಆಗುತ್ತದೆ? ಅದಕ್ಕೆ ಈ ರೀತಿ‌ ಹೇಳುತ್ತಾರೆ. ನೀವೇನೇ ಬಾಯಿ ಬಡಿದುಕೊಂಡರೂ ಲಿಂಗಾಯತರು ನಂಬುವುದಿಲ್ಲ ಎಂದು ಹೇಳಿದರು.

ಶೆಟ್ಟರ್‌ ವಿರುದ್ಧ ವಾಗ್ದಾಳಿ

ಜಗದೀಶ್ ಶೆಟ್ಟರ್ ಅವರೇ ನೀವು ರಾಜ್ಯಸಭಾ ಸದಸ್ಯರಾಗಿ, ಮಂತ್ರಿ ಆಗಿ ಎಂದು ಹೈಕಮಾಂಡ್ ಹೇಳಿತ್ತು. ನಿಮ್ಮ ಮನೆಯವರನ್ನೇ ಅಭ್ಯರ್ಥಿ ಮಾಡಿ ಎಂದು ಹೇಳಿತ್ತು. ಆದರೆ, ಕೇಳಲಿಲ್ಲ. ನಿಮ್ಮನ್ನು ಮುಖ್ಯಮಂತ್ರಿ, ಸ್ಪೀಕರ್, ವಿಪಕ್ಷ ನಾಯಕರನ್ನಾಗಿ ಮಾಡಿದ್ದು ಯಾರು? ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಯಾರು? ಎಂದು ಪ್ರಶ್ನಿಸಿದ ಸೋಮಣ್ಣ, ಶೆಟ್ಟರ್ ಇಷ್ಟೊಂದು ವೀಕ್ ಮೈಂಡೆಡ್ ಎಂದು ಗೊತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಶೆಟ್ಟರ್‌ ಅವರು ಇನ್ನು 6 ತಿಂಗಳು ಕೂಡ ಕಾಂಗ್ರೆಸ್‌ನಲ್ಲಿ‌ ಇರಲ್ಲ. ಅಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ. ಒಂದೆಡೆ ಸಿದ್ದರಾಮಯ್ಯ, ಇನ್ನೊಂದೆಡೆ ಖರ್ಗೆ, ಮತ್ತೊಂದೆಡೆ ಡಿ.ಕೆ. ಶಿವಕುಮಾರ್‌, ಮಗದೊಂದೆಡೆ ಪರಮೇಶ್ವರ್‌ ಇದ್ದಾರೆ. ಕಾಂಗ್ರೆಸ್‌ನವರದು ಬರಿ ಮೊಸಳೆ ಕಣ್ಣೀರು ಸುರಿಸುತ್ತಾರೆ. ಯಾಕೆ ನೀವು ದುಡುಕಿನ ತೀರ್ಮಾನ ತೆಗೆದುಕೊಂಡಿರಿ ಎಂದು ಶೆಟ್ಟರ್‌ ಅವರನ್ನು ಸೋಮಣ್ಣ ಪ್ರಶ್ನೆ ಮಾಡಿದರು.

ಇದನ್ನೂ ಓದಿ:Karnataka Elections 2023 : ಸಿದ್ದರಾಮಯ್ಯ ಮುಸ್ಲಿಮರ ನಾಯಕ, ಡಿಕೆಶಿ ಕ್ರಿಮಿನಲ್‌ಗಳ ನೇತಾರ ಎಂದ ಶೋಭಾ ಕರಂದ್ಲಾಜೆ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಒಬ್ಬರು 24×7 ಸಕ್ರಿಯ ಕಾರ್ಯಕರ್ತರು. ಅವರಿಗೆ ಯಾವುದೇ ಆಸೆ ಆಕಾಂಕ್ಷೆಗಳಿಲ್ಲ. ಅವರ ಬಗ್ಗೆ ಮಾತನಾಡಲು ಏನೂ ಇಲ್ಲ. ಅವರು ಇಡೀ ರಾಷ್ಟ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರು ನಮ್ಮ ರಾಜ್ಯದವರು ಎಂದು ಹೆಮ್ಮೆ ಪಡಬೇಕು ಎಂದು

Exit mobile version