Site icon Vistara News

Varthur prakash | ನನ್ನ ಕೆಲವು ಲಿಂಗಾಯತ, ಬ್ರಾಹ್ಮಣ ಸ್ನೇಹಿತರು ಕೆಜಿಗಟ್ಲೆ ನಾನ್‌ವೆಜ್‌ ತಿಂತಾರೆ ಎಂದ ವರ್ತೂರು ಪ್ರಕಾಶ್‌

ವರ್ತೂರು ಪ್ರಕಾಶ್‌

ಕೋಲಾರ: ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ಘೋಷಣೆ ಹೊರಬಿದ್ದ ಬಳಿಕ ಸುದ್ದಿಯ ಕೇಂದ್ರ ಬಿಂದುವಾಗಿರುವ ಬಿಜೆಪಿ ನಾಯಕ ವರ್ತೂರು ಪ್ರಕಾಶ್‌ (Varthur prakash) ಅವರು ಈಗ ಕುತೂಹಲಕಾರಿ ಮಾಹಿತಿಯೊಂದನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

ಕೋಲಾರದಲ್ಲಿ ಪತ್ರಕರ್ತರ ಸಂಘದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಅವರು ಯಾರೊಂದಿಗೂ ಫೋನ್‌ನಲ್ಲಿ ಮಾತನಾಡುತ್ತಾ ʻಲಿಂಗಾಯತ, ಬ್ರಾಹ್ಮಣರು ನಾನ್ ವೆಜ್ ತಿನ್ನುತ್ತಾರೆʼ ಅನ್ನುತ್ತಾರೆ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ʻʻನನ್ನ ಕೆಲವು ಸ್ನೇಹಿತರಿದ್ದಾರೆ, ಅವರು ಒಂದೂವರೆ ಕೆಜಿ ನಾನ್ ವೆಜ್ ತಿಂತಾರೆʼ ಅಂದಿದ್ದಾರೆ.

ವರ್ತೂರು ಪ್ರಕಾಶ್‌ ಮಾತನಾಡಿದ್ದು ಯಾರೊಂದಿಗೆ ಅನ್ನೋದು ಗೊತ್ತಿಲ್ಲ. ಆದರೆ, ತುಂಬಾ ಲಹರಿಯಿಂದ ಮಾತನಾಡಿದ್ದಾರೆ. ಬ್ರಾಹ್ಮಣರು ಮತ್ತು ಲಿಂಗಾಯತರು ನಾನ್‌ ವೆಜ್‌ ತಿನ್ನುವ ವಿಚಾರ ಇಲ್ಲಿ ಯಾಕೆ ಚರ್ಚೆಗೆ ಬಂತು, ಯಾರ ಜತೆಗೆ ಮಾತನಾಡಿದರು ಎನ್ನುವುದು ಸ್ಪಷ್ಟವಿಲ್ಲ.

ಏನೆಂದರು ವರ್ತೂರು ಪ್ರಕಾಶ್‌?
– ಬ್ರಾಹ್ಮಣರು, ಲಿಂಗಾಯತರು ನಾನ್‌ ವೆಜ್‌ ತಿನ್ನುತ್ತಾರೆ.
-ಗದಗ, ಹುಬ್ಬಳ್ಳಿ ಜಿಲ್ಲೆಯಲ್ಲಿ ೧೨ ಜನ ಎಂಎಲ್‌ಎಗಳು, ಅಣ್ಣತಮ್ಮಂದಿರು ಇದ್ದಾರೆ. ಅವರೆಲ್ಲ ಒಬ್ಬೊಬ್ಬರು ಕೆಜಿ ಮಾಂಸ ತಿಂತಾರೆ, ದೇವರಾಣೆ, ಅವರೆಲ್ಲ ನನ್ನ ಫ್ರೆಂಡ್ಸ್‌ ಸರ್‌
– ಅವನೊಬ್ಬ ಯಾರೋ ಮಿನಿಸ್ಟರ್‌ ಇದ್ದಾನಲ್ಲಾ.. ಬ್ರಾಹ್ಮಣ.. ಬಿಜೆಪಿಯವನು.. ಉದ್ದಕ್ಕಿದ್ದಾನಲ್ಲಾ.. ನನ್ನ ತಾಯಾಣೆಗೂ ಅವನು ಒಂದುವರೆ ಕೆಜಿ ತಿಂತಾನೆ ಸಾರ್‌..

ಇಷ್ಟು ಹೇಳಿದ ನಂತರ ವರ್ತೂರು ಪ್ರಕಾಶ್‌ ಅವರು ಫೋನ್‌ನಲ್ಲಿ ಮಾತನಾಡುವ ವ್ಯಕ್ತಿಯನ್ನು ಓಲೈಕೆ ಮಾಡುವಂತೆ ʻನೀವೊಬ್ರೇ ಸರ್‌ ದೇವರಾಣೆ ಒಳ್ಳೇರುʼ ಎನ್ನುತ್ತಾರೆ.

ಕೊನೆಗೆ ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಗೆದ್ದಿಲ್ಲ ಅಂದರೆ ನಾನು ನಿಮಗೆ ಮುಖ ತೋರಿಸುವುದಿಲ್ಲʼ ಅಂತಾರೆ.

ಇದನ್ನೂ ಓದಿ | ಕಾಸು ಕೊಡದಿದ್ರೆ ಜನ ವೋಟ್‌ ಮಾಡಲ್ಲ: ವರ್ತೂರು ಪ್ರಕಾಶ್‌ ವಿವಾದಾತ್ಮಕ ಹೇಳಿಕೆ

Exit mobile version