Site icon Vistara News

BSNL ಕಚೇರಿ ಗೇಟ್ ಬಿದ್ದು ಬಾಲಕ ದಾರುಣ ಸಾವು

boy death

ವಿಜಯನಗರ: BSNL ಕಚೇರಿ ಗೇಟ್ ಬಿದ್ದು ಬಾಲಕನೊಬ್ಬ ದಾರುಣವಾಗಿ ಸಾವು ಕಂಡ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ.

ಬಾಗಳಿ ಗ್ರಾಮದ ಎಂಟು ವರ್ಷದ ಗೌತಮ್ ಮೃತ ಬಾಲಕ. ಪೋಷಕರೊಂದಿಗೆ ಆಧಾರ್ ಕಾರ್ಡ್ ಮಾಡಿಸಲು ಬಂದಿದ್ದ ಬಾಲಕ ಗೌತಮ್ ಆಟವಾಡುತ್ತ BSNL ಕಚೇರಿಯ ಬಳಿ ನಿಂತಿದ್ದ. ಈ ವೇಳೆ ಶಿಥಿಲವಾಗಿದ್ದ ಗೇಟ್ ಕಳಚಿ ತಲೆಯ ಮೇಲೆ ಬಿದ್ದಿದೆ. ತಲೆಗೆ ತೀವ್ರ ಪೆಟ್ಟಾದುದರಿಂದ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ.

ಕಣ್ಣೆದುರಲ್ಲೇ ಆಟ ಆಡುತ್ತಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಸಂಬಂಧಿಕರು ಬಿಎಸ್‌ಎನ್‌ಎಲ್‌ ಕಚೇರಿ ಮುಂದೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಹರಪನಹಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version