Site icon Vistara News

Indecent behavior : ಮದ್ಯ ಸೇವಿಸಿ ಶಾಲೆಗೆ ನುಗ್ಗಿ ಹಳೆ ವಿದ್ಯಾರ್ಥಿಯ ಕಾಟ, ಬೇಸತ್ತ ಶಿಕ್ಷಕ ವೃಂದ

student

ವಿಜಯ ನಗರ: ವಿಜಯನಗರ ಜಿಲ್ಲೆಯ ಶಾಲೆಯೊಂದರಲ್ಲಿ ಹಳೆ ವಿದ್ಯಾರ್ಥಿಯೊಬ್ಬ ಮದ್ಯ ಸೇವಿಸಿ ಬಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತೊಂದರೆ ನೀಡಿದ ಘಟನೆ ನಡೆದಿದೆ.

ರಾಮು ಎಂಬ ಹಳೆ ವಿದ್ಯಾರ್ಥಿ ಮದ್ಯ, ಗಾಂಜಾ ಸೇವಿಸಿ, ಶಾಲೆಯ ಆವರಣ ಪ್ರವೇಶಿಸಿ, ತರಗತಿಗೂ ನುಗ್ಗಿ ಪಠ್ಯ ಪ್ರವಚನಗಳಿಗೆ ತೊಂದರೆ ನೀಡುತ್ತಿದ್ದಾನೆ. ನನಗೂ ಪಾಠ ಮಾಡಿ ಎನ್ನುತ್ತಾನೆ.

ಹಳೆಯ ವಿದ್ಯಾರ್ಥಿಯ ಕಾಟಕ್ಕೆ ಶ್ರೀಮತಿ ಕಟ್ಟಾ ಕೃಷ್ಣವೇಣಮ್ಮ ಸ್ಮಾರಕ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ.

ಹೊಸಪೇಟೆಯ ಊರಮ್ಮ ಬಯಲು ಪ್ರದೇಶದಲ್ಲಿರುವ ಶಾಲೆಯಲ್ಲಿ 1 ರಿಂದ 10 ತರಗತಿಯವರೆಗೆ 300 ಮಕ್ಕಳು ಓದುತ್ತಿದ್ದಾರೆ. ಆದರೆ ನಿತ್ಯವೂ ಈ ಹಳೆ ವಿದ್ಯಾರ್ಥಿಯ ಕಾಟ ಉಂಟಾಗಿದೆ ಎಂದು ಶಿಕ್ಷಕ ವೃಂದ ದೂರಿದೆ. ಈ ಶಾಲೆಗೆ ಸೂಕ್ತ ಭದ್ರತೆಯ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳು ಪಾಠ ಕೇಳುವ ಹೊತ್ತಲ್ಲೇ ಡೆಸ್ಕ್ ನಲ್ಲಿ ಕುಳಿತುಕೊಳ್ಳುತ್ತಾನೆ. ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.

Exit mobile version