Site icon Vistara News

ವಿಜಯಪುರದಲ್ಲಿ ಟೀ ಕುಡಿಯುವ ತಗಾದೆ, ಒಬ್ಬನ ಬರ್ಬರ ಹತ್ಯೆ

murder

ವಿಜಯಪುರ: ಟೇಬಲ್‌ ಮೇಲೆ ಕುಳಿತುಕೊಂಡು ಟೀ ಕುಡಿಯುವ ತಗಾದೆಯಲ್ಲಿ ಒಬ್ಬನನ್ನು ಹತ್ಯೆ ಮಾಡಿದ ಪ್ರಕರಣ ನಡೆದಿದೆ.

ಟೇಬಲ್‌ ಮೇಲೆ ಕುಳಿತು ಟೀ ಕುಡಿಯುವ ವಿಚಾರದಲ್ಲಿ ಉಂಟಾದ ತಗಾದೆ ಉಲ್ಬಣಗೊಂಡು, ಗಣಪತಿಸಿಂಗ್ ರಜಪೂತ್‌ ಎಂಬವನನ್ನು ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇವರನ್ನು ನಾಗರಾಜ್ ಗಣಿ, ಅಭಿಲಾಷ್ ರಜಪೂತ, ರಮೇಶ ಉಗಾರಕರ್, ಶಿವಪುತ್ರ ನಾವ್ಹಿ ಎಂದು ಗುರುತಿಸಲಾಗಿದೆ. ಹತ್ಯೆಯಲ್ಲಿ ಭಾಗಿಯಾಗಿರುವ ಸುಧಾಕರ ರಜಪೂತ, ಲಕ್ಷ್ಮಣ ಬಿರಾದಾರ ಎಂಬವರು ಇನ್ನೂ ನಾಪತ್ತೆಯಾಗಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version