Site icon Vistara News

Vistara News Launch | ಸಹಕಾರಿ ಧುರೀಣ ಡಾ. ಎಂ.ಎನ್. ರಾಜೇಂದ್ರ ಕುಮಾರ್‌ ಮುಡಿಗೇರಿತು ಕಾಯಕ ಯೋಗಿ ಪುರಸ್ಕಾರ

Vistara News Launch

ಮಂಗಳೂರು ಎಂದರೆ ಬ್ಯಾಂಕುಗಳ ತವರು. ದೇಶದ ಆರ್ಥಿಕ ಕ್ಷೇತ್ರಕ್ಕೆ ಅನೇಕ ಬ್ಯಾಂಕುಗಳನ್ನೇ ಕೊಡುಗೆಯಾಗಿ ನೀಡಿದ ಮಂಗಳೂರಿನಲ್ಲಿ ಈಗ ಮುಂಚೂಣಿಯಲ್ಲಿರುವುದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್. ಇದರ ಹಿಂದಿನ ಧೀಃಶಕ್ತಿ ಡಾ. ಎಂ.ಎನ್. ರಾಜೇಂದ್ರ ಕುಮಾರ್.

ಸಹಕಾರ ಕ್ಷೇತ್ರದಲ್ಲಿ ನಾಲ್ಕೂವರೆ ದಶಕಗಳ ಅಗಾಧ ಅನುಭವ ಹೊಂದಿರುವ ಡಾ. ಎಂ. ಎನ್. ರಾಜೇಂದ್ರ ಕುಮಾರ್ ರಾಜ್ಯ ಕಂಡ ಸಮರ್ಥ ಸಹಕಾರಿ ನಾಯಕ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ 26 ವರ್ಷಗಳಿಂದ ವಿಶಿಷ್ಟ ಕೊಡುಗೆ ನೀಡಿದ್ದಾರೆ.

ಅಪೆಕ್ಸ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅಧ್ಯಕ್ಷರಾಗಿ ರಾಜ್ಯದ ಗ್ರಾಮೀಣ ರೈತರ, ದುರ್ಬಲ ವರ್ಗದವರ ಆರ್ಥಿಕಾಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದಾರೆ. ಮನೆ ಬಾಗಿಲಿಗೆ ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಹೊಸ ಸೇವೆಗಳ ಮೂಲಕ ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಕಾರಣರಾಗಿದ್ದಾರೆ. ಔಟ್‌ಸ್ಟ್ಯಾಂಡಿಂಗ್‌ ಲೀಡರ್‌ಶಿಪ್‌ ಅವಾರ್ಡ್‌, ಗೌರವ ಡಾಕ್ಟರೇಟ್ ಸಹ ರಾಜೇಂದ್ರ ಕುಮಾರ್ ಅವರಿಗೆ ಸಂದಿವೆ. ಸಹಕಾರಿ ಕ್ಷೇತ್ರದ ಅಪ್ರತಿಮ ಸಾಧಕರಾದ ಇವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್‌ ಹೆಮ್ಮೆಪಡುತ್ತಿದೆ.

Exit mobile version