Site icon Vistara News

Photos | ವಿಸ್ತಾರ ನ್ಯೂಸ್​​​ ಆಯೋಜಿಸಿದ್ದ ‘ವಿವೇಕ ವಂದನೆ’ಯಲ್ಲಿ ಮಕ್ಕಳ ಕಲರವ

Vistaranews Vivekavandane Photo gallery

ಸ್ವಾಮಿ ವಿವೇಕಾನಂದರ 160ನೇ ಜಯಂತಿ ನಿಮಿತ್ತ ವಿಸ್ತಾರ ಮೀಡಿಯಾ ಪ್ರೈವೇಟ್​ ಲಿಮಿಟೆಡ್​​ನಿಂದ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ವಿಧಾನಸೌಧ ಮುಂಭಾಗ ಆಯೋಜಿಸಿದ್ದ ವಿವೇಕ ವಂದನೆ ಕಾರ್ಯಕ್ರಮದಲ್ಲಿ ವಿವಿಧ ಶಾಲೆ-ಕಾಲೇಜುಗಳ ಮಕ್ಕಳು ಪಾಲ್ಗೊಂದ್ದರು. ಅಪಾರ ಸಂಖ್ಯೆಯಲ್ಲಿ, ಶಿಸ್ತಿನ ಸಾಲಿನಲ್ಲಿ ಬಂದು ಕುಳಿತಿದ್ದ ಮಕ್ಕಳಿಗೆ, ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತಿ ವಿವೇಕ ಶಪಥ ಬೋಧಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ವೇದಿಕೆ ಏರುವುದಕ್ಕೂ ಮೊದಲು ಮಕ್ಕಳ ಬಳಿ ತೆರಳಿ, ಅವರ ಕೈಕುಲುಕಿದರು. ಕೆಲ ಮಕ್ಕಳಂತೂ ಸ್ವಾಮಿ ವಿವೇಕಾನಂದರಂತೆಯೇ ವೇಷ ಧರಿಸಿ ಬಂದು, ಮಂದಹಾಸ ಬೀರುತ್ತ ಕುಳಿತಿದ್ದರು. ಇಲ್ಲಿವೆ ನೋಡಿ ಕೆಲವು ಆಕರ್ಷಣೀಯ ಫೋಟೋಗಳು.

ಇದನ್ನೂ ಓದಿ: Vivekananda Jayanti | ಮುಂದಿನ ವರ್ಷ ಜಿಲ್ಲೆ, ತಾಲೂಕು, ಹೋಬಳಿ ಹಂತದಲ್ಲಿ ʼವಿವೇಕ ವಂದನೆʼ ಕಾರ್ಯಕ್ರಮ: ಹರಿಪ್ರಕಾಶ್‌ ಕೋಣೆಮನೆ ಘೋಷಣೆ

Exit mobile version