Site icon Vistara News

Karnataka Politics: ಸೂಲಿಬೆಲೆಯನ್ನು ಬಂಧಿಸಿದರೆ ಕೈಕಟ್ಟಿ ಕೂರಲ್ಲ: ಕೋಟ ಶ್ರೀನಿವಾಸ ಪೂಜಾರಿ

Kota Srinivas Poojary

#image_title

ಉಡುಪಿ: ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ ಎಂ.ಬಿ. ಪಾಟೀಲ್ ಅವರು ಆಡಿದ ಮಾತುಗಳು ನನಗೆ ಆಶ್ಚರ್ಯ ಮೂಡಿಸಿದೆ (Karnataka Politics). ಜೈಲಿಗಟ್ಟಲು ಅವರೇನೂ ಭಯೋತ್ಪಾದಕರಲ್ಲ. ರಾಷ್ಟ್ರೀಯವಾದಿಯೊಬ್ಬರನ್ನು ಬಂಧಿಸಿದರೆ ಬಿಜೆಪಿ ಕೈಕಟ್ಟಿ ಕೂರಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಚಕ್ರವರ್ತಿ ಸೂಲಿಬೆಲೆಗೆ ಜೈಲು ಗ್ಯಾರಂಟಿ ಎಂಬ ಸಚಿವ ಎಂ.ಬಿ.ಪಾಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಸುಮ್ಮನೆ ಇದ್ದರೆ ಆಯ್ತು, ಇಲ್ಲವಾದರೆ ಜೈಲಿಗಟ್ಟುತ್ತೇನೆ ಏಂಬ ಸಚಿವರ ಮಾತು ಕೇಳಿ ನನಗೆ ದಿಗ್ಭ್ರಮೆಯಾಗಿದೆ. ಚಕ್ರವರ್ತಿ ಸೂಲಿಬೆಲೆ ಭಯೋತ್ಪಾದಕ ಅಲ್ಲ, ಒಬ್ಬ ರಾಷ್ಟ್ರಭಕ್ತ, ರಾಷ್ಟ್ರೀಯವಾದಿ ವಿಚಾರಗಳನ್ನು ಜನಮಾನಸದಲ್ಲಿ ಬಿತ್ತುವ ಭಾಷಣಕಾರ, ಉತ್ತಮ ಸಂಘಟಕ. ಅಪರಾಧವಲ್ಲದಂತಹ ರಾಷ್ಟ್ರೀಯವಾದಿ ನಿಲುವುಗಳನ್ನು ಜನರ ಮುಂದಿಡುವವರು. ಹೀಗಾಗಿ ಮಂತ್ರಿಗಳು ತಮ್ಮ ಇತಿಮತಿಯೊಳಗೆ ಮಾತನಾಡಬೇಕು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ | Karnataka Politics: ಹಿಟ್ಲರ್‌ ಗಿಟ್ಲರ್‌ ಅಂದ್ರೆ ಜೈಲು ಗ್ಯಾರಂಟಿ: ಇದು ಚಕ್ರವರ್ತಿ ಸೂಲಿಬೆಲೆಗೆ ಎಂ.ಬಿ. ಪಾಟೀಲ್‌ ಎಚ್ಚರಿಕೆ ಧಾಟಿ!

ನಿಮಗೆ ರಾಜ್ಯದ ಹೊಣೆಗಾರಿಕೆ ಇದೆ, ಇಂತಹ ವಿಚಾರಗಳಲ್ಲಿ ಮಾತನಾಡುವುದು ಸರಿಯಲ್ಲ. ನೀವು ನಿಮ್ಮ ಹೇಳಿಕೆ ಹಿಂಪಡೆಯುವುದು ಉತ್ತಮ. ಚಕ್ರವರ್ತಿ ಸೂಲಿಬೆಲೆಯವರಿಗೆ ವಿನಾಕಾರಣ ತೊಂದರೆ ಕೊಟ್ಟಲ್ಲಿ ಬಿಜೆಪಿ ಸುಮ್ಮನಿರಲ್ಲ. ನಮಗೂ ನ್ಯಾಯ ಕೇಳುವ ಹಕ್ಕಿದೆ. ಯಾವ ರೀತಿ ಪ್ರತಿಕ್ರಿಯಿಸಬೇಕೋ, ಅದೇ ರೀತಿ ಪ್ರತಿಕ್ರಿಯಿಸುತ್ತೇವೆ ಎಂದು ತಿಳಿಸಿದ್ದಾರೆ.

Exit mobile version