Site icon Vistara News

Yadagiri News: ಕಂಠಪೂರ್ತಿ ಕುಡಿದು ಯುವಕನ ಪುಂಡಾಟ; ಕೈಯಲ್ಲಿ ಮಚ್ಚು ಹಿಡಿದು ರಾದ್ಧಾಂತ

The young man's drunken nes Holding a machete in hand

The young man's drunken nes Holding a machete in hand

ಯಾದಗಿರಿ: ಮದ್ಯದ ಅಮಲಿನಲ್ಲಿ ಯುವಕನೊಬ್ಬ ಕೈಯಲ್ಲಿ ಮಚ್ಚು ಹಿಡಿದು ಪುಂಡಾಟ ನಡೆಸಿರುವ ಘಟನೆ ಯಾದಗಿರಿ ನಗರ (Yadagiri News) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪುಂಡಾಟ ನಡೆಸಿದವನು ಹನುಮಂತ ಎಂದು ತಿಳಿದು ಬಂದಿದೆ.

ಚಲಿಸುತ್ತಿದ್ದ ಲಾರಿ ಮೇಲೆ ಹನುಮಂತ ಮಚ್ಚು ಬೀಸಿದ್ದು, ಚಾಲಕ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಮಚ್ಚಿನ ಏಟಿಗೆ ಲಾರಿ ಗ್ಲಾಸ್ ಪುಡಿ ಪುಡಿ ಆಗಿದೆ. ಇದಕ್ಕೂ ಮೊದಲು ನಿಂತಿದ್ದ ಕಾರಿಗೆ ಹಾನಿ ಮಾಡಿದ್ದು ಹಿಂದಿನ ಗ್ಲಾಸ್ ಸಂಪೂರ್ಣ ಪುಡಿಪುಡಿಯಾಗಿದೆ.

ಲಾರಿ ಮುಂಭಾಗದ ಗಾಜಿಗೆ ಮಚ್ಚು ಬೀಸಿ ಹುಚ್ಚಾಟ

ಇಷ್ಟಕ್ಕೆ ನಿಲ್ಲದ ಹನುಮಂತನ ಹುಚ್ಚಾಟ ಬೈಕ್‌ ಸವಾರರು, ರಸ್ತೆಯಲ್ಲಿ ನಿಂತವರ ಮೇಲೂ ಮಚ್ಚು ಬೀಸಿದ್ದಾನೆ. ಈತನ ನಡೆಯಿಂದ ಭೀತಿಗೊಂಡ ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಸಾವು-ನೋವು ಸಂಭವಿಸಿಲ್ಲ.

ಪುಂಡಾಟ ನಡೆಸಿದ ಹನುಮಂತ

ಇದನ್ನೂ ಓದಿ: Acid attack: ಆ್ಯಸಿಡ್‌ ದಾಳಿಗೆ ಒಳಗಾದ ಬಾಲಕಿಗೆ ಸಾಂತ್ವನ ಹೇಳಿದ ಡಿಕೆ ಶಿವಕುಮಾರ್‌

ಇತ್ತ ಮಗ ಹನುಮಂತನ ದಾಂಧಲೆ ಸುದ್ದಿ ಕೇಳಿ ಓಡಿ ಬಂದ ತಾಯಿ ತಡೆಯಲು ಮುಂದಾದರೂ ಮಾತು ಕೇಳದೆ ಪುಂಡಾಟ ನಡೆಸಿದ್ದಾನೆ. ರೊಚ್ಚಿಗೆದ್ದ ಜನರು ಗುಂಪು ಥಳಿಸಿದ್ದು, ಬಳಿಕ ಸ್ಥಳಕ್ಕೆ ಬಂದ ಪೊಲೀಸರಿಗೆ ಒಪ್ಪಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version