Site icon Vistara News

JDS Pancharatna: ನೀವು ಮತ್ತೆ ರಾಜ್ಯದ ಸಿಎಂ ಆಗ್ತೀರಿ: ಕುಮಾರಸ್ವಾಮಿಗೆ ಕೆರೆಕೋಡಿ ರಂಗಾಪುರ ಮಠದ ಶ್ರೀ ಆಶೀರ್ವಾದ

You will become cm of the state again, says Kerekodi Rangapura Mutt Sri to Hd Kumaraswamy

#image_title

ತುಮಕೂರು: ತಿಪಟೂರು ತಾಲೂಕಿನಲ್ಲಿ ಬುಧವಾರ ನಡೆದ ಜೆಡಿಎಸ್ ಪಂಚರತ್ನ ಯಾತ್ರೆ‌ (JDS Pancharatna) ವೇಳೆ ಕೆರೆಕೋಡಿ ರಂಗಾಪುರ ಮಠಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಈ ವೇಳೆ ಸ್ವಾಮೀಜಿಗಳು, ನೀವು ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದೀರಿ ಎಂದು ಆಶೀರ್ವಾದ ಮಾಡಿದ್ದಾರೆ.

ಮಠಕ್ಕೆ ಭೇಟಿ ನೀಡಿದ್ದಾಗ ಕೆಲಕಾಲ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿಗಳ ಜತೆ ಎಚ್‌ಡಿಕೆ ಮಾತುಕತೆ ನಡೆಸಿದರು. ಈ ವೇಳೆ ಮಾಜಿ ಪ್ರಧಾನಿ ದೇವೆಗೌಡರನ್ನು ಶ್ರೀಗಳು ನೆನೆದರು. ಈ ಹಿಂದೆ ಎಚ್.ಡಿ.ದೇವೆಗೌಡರಿಗೂ ದೊಡ್ಡ ಹುದ್ದೆಗೆ ಹೋಗುತ್ತೀರಿ ಎಂದು ಶ್ರೀಗಳು ಆಶೀರ್ವದಿಸಿದ್ದರು. ನಂತರ ಅವರು ಪ್ರಧಾನಿ ಹುದ್ದೆ ಅಲಂಕರಿಸಿದ್ದರು. ಇದೀಗ ಕುಮಾರಸ್ವಾಮಿಗೂ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗ್ತೀರಿ ಎಂದು ಆಶೀರ್ವಾದ ಮಾಡಿದ್ದಾರೆ.

ಇದನ್ನೂ ಓದಿ | Karnataka Election 2023: ಸಿಂಧೂರ ಇಡುವವರು ಕಾಂಗ್ರೆಸ್‌ಗೆ ಮತ ನೀಡಬಾರದು: ಸಿ.ಟಿ. ರವಿ

ನಿಮ್ಮಿಂದ ರಾಜ್ಯಕ್ಕೆ ಒಳ್ಳೆಯದಾಗಲಿ, ನೀವು ಮತ್ತೆ ಸಿಎಂ ಆಗುತ್ತೀರಿ ಎಂದು ಶ್ರೀಗಳು ಎಚ್‌ಡಿಕೆ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಇದೇ ವೇಳೇ ಮಠದ ಉರಿಗದ್ದುಗೆಗೆ ಕುಮಾರಸ್ವಾಮಿ ಪೂಜೆ ಸಲ್ಲಿಸಿದರು.

Exit mobile version