Site icon Vistara News

Suicide | Sorry ಅಮ್ಮ, ಅಣ್ಣ ಎಂದು ಸ್ಟೇಟಸ್‌ ಹಾಕಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡ ಯುವಕ

drowned

ಕೊಪ್ಪಳ: ಜಿಲ್ಲೆ ಕುಷ್ಟಗಿ ತಾಲೂಕಿನ ಜುಮಲಾಪುರಲ್ಲಿ ಕೆರೆಗೆ ಹಾರಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಮಹೇಶ ಬಾದವಾಡಗಿ (27) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ.

ʻʻSorry ಅಮ್ಮ, ಅಣ್ಣʼ ಎಂದು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದ ಯುವಕ ಮೊಬೈಲ್‌ನ್ನು ದಡದಲ್ಲಿಟ್ಟು ಕೆರೆಗೆ ಹಾರಿದ್ದಾನೆ. ವಿಷಯ ತಿಳಿದ ಮನೆಯವರು ಕೆರೆಯ ಬಳಿ ಧಾವಿಸಿದಾಗ ಆತ ನಾಪತ್ತೆಯಾಗಿದ್ದ. ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಯುವಕನ ಶವ ಹೊರತೆಗೆದಿದ್ದಾರೆ.

ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ಇದಾಗಿದೆ. ನೂರಾರು ಜನರು ಕೆರೆಯ ದಡದಲ್ಲಿ ಸೇರಿದ್ದಾರೆ. ಮನೆ ಮಂದಿ ಕಣ್ಣೀರು ಹಾಕುತ್ತಿದ್ದರು.

ಇದನ್ನೂ ಓದಿ | Drowned | ಶಿರಸಿಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Exit mobile version