Site icon Vistara News

Drowned | ಪಿಲಿಗುಂಡ ಬಳಿ ಕಾಲುವೆಗೆ ಈಜಲು ತೆರಳಿದ್ದ ಯುವಕ ನೀರುಪಾಲು

Neerupalu

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಪಿಲಿಗುಂಡ ಬಳಿ ಕಾಲುವೆಗೆ ಈಜಲು ಹೋಗಿದ್ದ ಯುವಕನೊಬ್ಬ ನೀರು ಪಾಲಾಗಿದ್ದಾರೆ.

ಬಳ್ಳಾರಿ ಮೂಲದ ಮಹೇಶ ಸ್ವಾಮಿ(19) ಮೃತ ದುರ್ದೈವಿ. ಈತ ಪಿಲಿಗುಂಡ ಬಳಿಯ ನಾರಾಯಣಪುರ ಬಲದಂಡೆ ಕಾಲುವೆಗೆ ಈಜಲು ಹೋಗಿದ್ದರು. ಮಹೇಶ ಸ್ವಾಮಿಗೆ ಈಜಲು ಬರುತ್ತಿರಲಿಲ್ಲ ಎನ್ನಲಾಗಿದೆ. ಆದರೆ, ನೀರು ಕಡಿಮೆ ಇರಬಹುದು ಎಂಬ ಕಾರಣಕ್ಕೆ ನೀರಿಗೆ ಇಳಿದಿದ್ದರು. ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಯುವಕನ ಮೃತದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಮೇಲೆತ್ತಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version