Site icon Vistara News

Young man drowned | ಕಣ್ಣೂರು ಸಮುದ್ರದಲ್ಲಿ ಈಜಲು ತೆರಳಿದ್ದ ಮಡಿಕೇರಿ ಯುವಕ ಸಾವು; ಶಬರಿಮಲೆಗೆ ತೆರಳಿದ್ದವನು ಸಮುದ್ರಪಾಲು

ನೀರುಪಾಲು

ಮಡಿಕೇರಿ/ಕಣ್ಣೂರು: ಶಬರಿಮಲೆಗೆ ತೆರಳಿದ್ದ ಯುವಕನೊಬ್ಬ ಸಮುದ್ರಪಾಲಾದ (Young man drowned) ಘಟನೆ ಕೇರಳದ ಕಣ್ಣೂರುವಿನಲ್ಲಿ ಶನಿವಾರ ಮುಂಜಾನೆ ನಡೆದಿದೆ. ಮಡಿಕೇರಿ ಜಲಾಶಯ ಬಡಾವಣೆ ನಿವಾಸಿ ಶಶಾಂಕ್ (೨೫) ಮೃತ ದುರ್ದೈವಿ.

ಶಬರಿಮಲೆಯಿಂದ ಮರಳುತ್ತಿದ್ದ ಸಂದರ್ಭದಲ್ಲಿ ಶಶಾಂಕ್ ತನ್ನ ಇನ್ನಿಬ್ಬರು ಸ್ನೇಹಿತರೊಂದಿಗೆ ಕಣ್ಣೂರು ಸಮುದ್ರಕ್ಕೆ ಈಜಲು ತೆರಳಿದ್ದ. ಈ ಸಂದರ್ಭದಲ್ಲಿ ಮೂವರು ಯುವಕರು ಸಮುದ್ರದ ಅಲೆಗೆ ಸಿಲುಕಿದ್ದು, ಈ ಪೈಕಿ ಇಬ್ಬರನ್ನು ಅಲ್ಲಿ ರಕ್ಷಿಸಲಾಗಿದೆ.

ಆದರೆ ಶಶಾಂಕ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಣ್ಣೂರಿನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಮೃತದೇಹವನ್ನು ನೀಡಲಾಗಿದೆ. ಶನಿವಾರ ಸಂಜೆ ವೇಳೆಗೆ ಮಡಿಕೇರಿಯ ನಿವಾಸಕ್ಕೆ ಮೃತದೇಹವನ್ನು ತರಲಾಗುತ್ತದೆ.

ಇದನ್ನೂ ಓದಿ | Unidentified body found | ಕಸ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ; ಕೊಲೆ ಶಂಕೆ

Exit mobile version