Site icon Vistara News

Electricution : ನೀರಿನ ಪಂಪ್‌ ಸ್ವಿಚ್‌ ಹಾಕಲು ಹೋದಾಗ ವಿದ್ಯುತ್‌ ಶಾಕ್‌, ಯುವಕ ಮೃತ್ಯು

Electricution death

#image_title

ಲಕ್ಷ್ಮೇಶ್ವರ (ಗದಗ): ನೀರಿನ ಪಂಪ್‌ ಮೋಟಾರ್ ಸ್ವಿಚ್ ಹಾಕಲು ಹೋಗಿ ಯುವಕನೊಬ್ಬ ಜೀವ ಕಳೆದುಕೊಂಡಿದ್ದಾನೆ (Electricution). ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಈಶ್ವರ ಬಸಪ್ಪ ಕುರಿ (22) ಮೃತ ದುರ್ದೈವಿ.

ಈಶ್ವರ ಬಸಪ್ಪ ಅವರು ಮನೆಯಲ್ಲಿನ ಮೋಟಾರ್ ಸ್ವಿಚ್ ಹಾಕುವಾಗ ಒಮ್ಮಿಂದೊಮ್ಮೆಗೇ ವಿದ್ಯುತ್‌ ಶಾಕ್‌ ಹೊಡೆದಿದೆ. ವಿದ್ಯುದಾಘಾತಕ್ಕೆ ಒಳಗಾದ ಯುವಕ ಅಲ್ಲೇ ಕುಸಿದು ಬಿದ್ದಿದ್ದು, ಮನೆಯವರು ಬಂದು ನೋಡುವಾಗ ಯುವಕ ಪ್ರಾಣ ಕಳೆದುಕೊಂಡಿದ್ದ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ಮಗನಿಂದಲೇ ತಂದೆಯ ಕೊಲೆ; ಗ್ರೈಂಡರ್‌ನ ಸ್ಟ್ಯಾಂಡ್‌ನಿಂದ ತಲೆಗೆ ಹೊಡೆದ!

ಹೊನ್ನಾವರ: ತಾಲೂಕಿನ ಕರ್ಕಿ ತೊಪ್ಪಲಕೇರಿಯಲ್ಲಿ ಯುವಕನೊಬ್ಬ ತನ್ನ ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿದ (Man kills his father) ಘಟನೆ ಶುಕ್ರವಾರ ನಡೆದಿದೆ. ತೊಪ್ಪಲ ಕೇರಿಯ ನಿವಾಸಿ, ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದ ಪಾಂಡುರಂಗ ಶೇಷಯ್ಯ ಮೇಸ್ತಾ (62) ಎಂಬವರನ್ನು ಅವರ ಮಗ ಭರತ್‌ ಮೇಸ್ತಾ (26) ಕೊಲೆ ಮಾಡಿದ್ದಾನೆ.

ಅವರಿಬ್ಬರ ಮಧ್ಯೆ ಹಿಂದಿನಿಂದಲೂ ಉತ್ತಮ ಸಂಬಂಧವೇನೂ ಇದ್ದಂತಿಲ್ಲ. ಇದಕ್ಕಾಗಿ ಕೊಲೆಗೆ ಸಮಯ ಸಾಧಿಸುತ್ತಿದ್ದವನಂತೆ ಇದ್ದ ಭರತ್‌ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಅದಕ್ಕಾಗಿ ಸರ್ವ ರೀತಿಯಲ್ಲೂ ಸಜ್ಜಾಗಿದ್ದ.

ಕೊಲೆ ಮಾಡುವ ಉದ್ದೇಶದಿಂದಲೇ ಮನೆಯಲ್ಲಿದ್ದ ಗ್ರೈಂಡರ್‌ನ ಕಬ್ಬಿಣದ ಸ್ಟ್ಯಾಂಡ್‌ನಿಂದ ತನ್ನ ತಂದೆಯ ತಲೆಗೆ ಬಲವಾಗಿ ಹೊಡೆದು, ಕೈಗೆ ಸಿಕ್ಕ ಚಾಕುವಿನಿಂದ ಇರಿದು ಗಾಯಗೊಳಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಈ ಕುರಿತು ಆರೋಪಿಯ ಸಹೋದರ ವಿಶಾಲ್ ಪಾಂಡುರಂಗ ಮೇಸ್ತ ತನ್ನ ತಮ್ಮನ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : Road Accident: ಅಯೋಧ್ಯೆಯಲ್ಲಿ ಬಸ್​ ಭೀಕರ ಅಪಘಾತ; 7 ಪ್ರಯಾಣಿಕರ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

Exit mobile version