Site icon Vistara News

Suicide Case : ಕುಡಿದ ಮತ್ತಿನಲ್ಲಿ ಕಟ್ಟಡದ 3ನೇ ಮಹಡಿಯಲ್ಲಿದ್ದ ಪಬ್‌ನಿಂದ ಜಿಗಿದು ಯುವಕ ಸಾವು!

jumbing from building

#image_title

ಬೆಳಗಾವಿ: ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂರನೇ ಮಹಡಿಯಲ್ಲಿದ್ದ ಪಬ್‌ನಿಂದ ಹೊರಜಿಗಿದು ಜೀವ ಕಳೆದುಕೊಂಡ ಯುವಕನನ್ನು ಯೋಗೇಶ್‌ ಶಾನಭಾಗ್‌ (೨೮) ಎಂದು ಗುರುತಿಸಲಾಗಿದೆ.

ಬೆಳಗಾವಿಯ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ತಮ್ಮಣ್ಣ ಆರ್ಕೇಡ್‌‌ನಲ್ಲಿ ಘಟನೆ ನಡೆದಿದೆ. ಈ ಕಟ್ಟಡದ ಮೂರನೇ ಮಹಡಿಯಲ್ಲಿ ಬ್ರೂ59 ಎಂಬ ಹೆಸರಿನ ಪಬ್‌ ಇದೆ. ಅದರ ಕಿಟಕಿಯಿಂದ ಹೊರಜಿಗಿದು ಯೋಗೇಶ್‌ ಪ್ರಾಣ ಕಳೆದುಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಮೂಲದ ಯೋಗೇಶ್ ಶಾನಬಾಗ್(28) ಸಂಜೆ 6 ಗಂಟೆ ಹೊತ್ತಿಗೆ ಸ್ನೇಹಿತೆ ಮತ್ತು ಸ್ನೇಹಿತನ ಜೊತೆ ಪಬ್‌ಗೆ ಬಂದಿದ್ದ. ಈ ವೇಳೆ ಪಬ್‌ನಲ್ಲಿ ಕಿಟಕಿ ಬಳಿ ಬಂದು ಏಕಾಏಕಿ ಕೆಳಗೆ ಜಿಗಿದಿದ್ದಾನೆ.

ಗಂಭೀರ ಗಾಯಗೊಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯೋಗೇಶ್ ಶಾನ್‌ಭಾಗ್ ಬಳಿಕ ಚಿಕಿತ್ಸೆ ಫಲಿಸದೆ ಪ್ರಾಣ ಕಳೆದುಕೊಂಡಿದ್ದಾನೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸಹವರ್ತಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ದಾಂಪತ್ಯ ಕಲಹದಿಂದ ಕೆರೆಗೆ ಹಾರಲು ಹೋದವಳನ್ನು ತಳ್ಳಿ ತಾನೂ ಬಿದ್ದ; ಪತ್ನಿ ಪಾರು, ಪತಿ ಸಾವು

ಮಡಿಕೇರಿ: ಇಲ್ಲಿನ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ಹೊರೂರು ಗ್ರಾಮದಲ್ಲಿ ದಂಪತಿ ಆತ್ಮಹತ್ಯೆಗೆ (Suicide Case) ಯತ್ನಿಸಿದ್ದಾರೆ. ಘಟನೆಯಲ್ಲಿ ಪತಿ ಮೃತಪಟ್ಟರೆ, ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಂಜು ಪೊನ್ನಪ್ಪರವರ ಎಂಬುವವರ ತೋಟದ ಕಾರ್ಮಿಕರಾಗಿರುವ ವಿಜಯ್ (32) ಮತ್ತು ಸೌಮ್ಯ (29) ದಂಪತಿ ನಡುವೆ ಭಾನುವಾರ (ಫೆ.13) ಮಧ್ಯಾಹ್ನ ಕಲಹ ಏರ್ಪಟ್ಟಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತ ಸೌಮ್ಯ ಆತ್ಮಹತ್ಯೆ ಮಾಡಿಕೊಳ್ಳಲೆಂದು ತೋಟದ ಕೆರೆ ಬಳಿ ಬಂದಿದ್ದಾಳೆ.

ಅಲ್ಲಿಗೂ ಓಡಿ ಬಂದ ವಿಜಯ್ ಮತ್ತೆ ತಗಾದೆ ತೆಗೆದಿದ್ದಾನೆ. ಏನೇ ಆದರೂ ತಾನು ಜೀವಂತ ಇರುವುದಿಲ್ಲ ಎಂಬ ರೀತಿಯಲ್ಲಿ ಸೌಮ್ಯ ಸಹ ಜಗಳವಾಡಿದ್ದಾಳೆ ಎನ್ನಲಾಗಿದೆ. ಕೊನೆಗೆ ನೀನೇನು ಸಾಯುತ್ತೀಯಾ? ನಾನೇ ತಳ್ಳಿಬಿಡುತ್ತೇನೆ ಎಂದು ಪತ್ನಿಯನ್ನು ತಳ್ಳಿ ತಾನೂ ಕೆರೆಗೆ ಹಾರಿದ್ದಾನೆ.Suicide Case: ದಾಂಪತ್ಯ ಕಲಹದಿಂದ ಕೆರೆಗೆ ಹಾರಲು ಹೋದವಳನ್ನು ತಳ್ಳಿ ತಾನೂ ಬಿದ್ದ; ಪತ್ನಿ ಪಾರು, ಪತಿ ಸಾವು

ಇದೇ ವೇಳೆ ಸ್ಥಳೀಯರು ಜಲಸಮಾಧಿ ಆಗಲಿದ್ದ ಸೌಮ್ಯಳನ್ನು ಸಕಾಲದಲ್ಲಿ ದಡಕ್ಕೆ ಸೇರಿಸಿ ಜೀವ ಉಳಿಸಿದ್ದಾರೆ. ಆದರೆ ವಿಜಯ್ ನೀರಿನಲ್ಲಿಯೇ ಮುಳುಗಿ ಮೃತಪಟ್ಟಿದ್ದಾನೆ. ಸಂಜೆಯವರೆಗೆ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಈ ದಂಪತಿಗೆ 5 ತಿಂಗಳ ಮಗುವಿದ್ದು, ಇದೀಗ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Suicide case : ಕೆಎಎಸ್‌ ಅಧಿಕಾರಿ ರೇಷ್ಮಾ ತಾಳಿಕೋಟಿ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Exit mobile version