Site icon Vistara News

ಕಲ್ಲಿನಿಂದ ತಲೆಗೆ ಜಜ್ಜಿ ಹಳೆ ಸ್ನೇಹಿತನ ಕೊಲೆ, 2 ವರ್ಷದ ಹಿಂದೆ ಹೊಡೆದಿದ್ದಕ್ಕೆ ಈಗ ಸೇಡು!

murder bagalkote

ಬಾಗಲಕೋಟೆ: ಬಾಗಲಕೋಟೆಯ ಮಲ್ಲಮ್ಮ ನಗರದಲ್ಲಿ ಯುವಕನೊಬ್ಬ ತನ್ನ ಹಳೆಯ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಎರಡು ವರ್ಷದ ಹಿಂದಿನ ಒಂದು ಸೇಡು ಈ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.

ಮಲ್ಲಮ್ಮ ನಗರದ ಅಂಗನವಾಡಿಯಲ್ಲಿ ಮುಂಜಾನೆ ಈ ಕೊಲೆ ನಡೆದಿದ್ದು, ಮಹ್ಮದ್ ಭಾಗವಾನ್(೨೨)ಕೊಲೆಯಾದ ಯುವಕ. ಭದ್ರೇಶ್ ಮೊಹಿತೆ ಎಂಬವನು ಕೊಲೆ ಮಾಡಿದ ಹಳೆ ಸ್ನೇಹಿತ.

ಮಹ್ಮದ್‌ ಭಾಗವಾನ್‌ ಮತ್ತು ಭದ್ರೇಶ್‌ ಮೋಹಿತೆ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಹಿಂದೆ ಜೀವದ ಗೆಳೆಯರಂತೆಯೇ ಇದ್ದವರು. ಆದರೆ, ಎರಡು ವರ್ಷದ ಹಿಂದೆ ಅವರ ಮಧ್ಯೆ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿತ್ತು. ಮಾತಿಗೆ ಮಾತು ಬೆಳೆದು ಭಾಗವಾನ್‌ ಭದ್ರೇಶನಿಗೆ ಹೊಡೆದಿದ್ದ. ಮತ್ತು ಚಾಕುವಿನಿಂದ ಇರಿಯಲು ಮುಂದಾಗಿದ್ದ.

ಇದಾದ ಬಳಿಕ ಅವರ ಮಧ್ಯೆ ಮಾತುಕತೆ ಇರಲಿಲ್ಲ. ಹಾಗಂತ ಈ ಮಟ್ಟದ ದ್ವೇಷ ಇರಬಹುದು ಎಂದು ಯಾರೂ ಅಂದಾಜು ಮಾಡಿರಲಿಲ್ಲ. ಎಷ್ಟು ಕಾಲದಿಂದ ಸೇಡು ತೀರಿಸಲು ಹೊಂಚು ಹಾಕಿದ್ದನೋ ಗೊತ್ತಿಲ್ಲ. ಭಾನುವಾರ ಮುಂಜಾನೆ ಭಾಗವಾನ್‌ ನಡೆದುಕೊಂಡು ಹೋಗುತ್ತಿರುವಾಗ ಕಾದು ನಿಂತು ಮಾತಿಗೆಳೆದ ಭದ್ರೇಶ್‌ ಹಲ್ಲೆ ಮಾಡಿದ್ದಾನೆ. ಬಳಿಕ ಕಲ್ಲಿನಿಂದ ತಲೆ ಮತ್ತು ಮುಖಕ್ಕೆ ಜಜ್ಜಿ ಕೊಲೆ ಮಾಡಿದ್ದಾನೆ. ಮುಧೋಖ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಭದ್ರೇಶನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಬ್ಬರ ನಡುವೆ ಇಷ್ಟೊಂದು ದ್ವೇಷಕ್ಕೆ ಕಾರಣವಾದ ಸಂಗತಿ ಯಾವುದು? ಈಗ ಕೊಲೆ ಮಾಡಲು ನಿಜವಾದ ಕಾರಣವೇನು ಎನ್ನುವುದು ತನಿಖೆಯಿಂದ ತಿಳಿದುಬರಬೇಕಾಗಿದೆ.

ಇದನ್ನೂ ಓದಿ| Murder Case | ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ರುಂಡ ಕತ್ತರಿಸಿ ಬರ್ಬರ ಕೊಲೆ!

Exit mobile version